ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಹಣಕಾಸಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ
Published 16 ಜೂನ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪದವಿ ವಿದ್ಯಾರ್ಥಿಗಳ ಅತಿರೇಕದ ವರ್ತನೆಯು ಹಲವು ಬಾರಿ ಶಿಕ್ಷಕರಿಂದ ಗಮನಿಸಲ್ಪಟ್ಟದ್ದರಿಂದ ಕಠಿಣ ಕ್ರಮ ಕೈಗೊಳ್ಳಬಹುದು. ಹವ್ಯಾಸಿ ಬರಹಗಾರರಿಗೆ ಖ್ಯಾತಿ ಪಡೆಯಲು ಉತ್ತಮ ವೇದಿಕೆ ದೊರಕುವುದು.
ವೃಷಭ
ರಾಜಕೀಯ ವ್ಯಕ್ತಿಗಳಿಗೆ ನಂಬಿಕೆ ದ್ರೋಹ ಅಥವಾ ಅಪಪ್ರಚಾರದಂಥ ಸಮಸ್ಯೆಗಳು ಎದುರಾಗಬಹುದು. ಬಿಸಿನೆಸ್ ಸಂಬಂಧ ಬ್ಯಾಂಕ್ ಅಧಿಕಾರಿಗಳ ಜತೆ ತಕ್ಷಣದಲ್ಲಿ ಮಾತುಕತೆ ನಡೆಸಬೇಕಾದೀತು.
ಮಿಥುನ
ಸಂಗಾತಿಯ ಮನಸ್ಸಿನ ಮಾತುಗಳನ್ನು ಅರಿತು ಅದನ್ನು ಈಡೇರಿಸುವ ಸಂಕಲ್ಪವನ್ನು ಮಾಡುವಿರಿ. ಅಸಾಧಾರಣ ರೀತಿಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುತ್ತೀರಿ. ಆರೋಗ್ಯದಲ್ಲಿ ವ್ಯತ್ಯಯ ಕಾಣಲಿದೆ.
ಕರ್ಕಾಟಕ
ವಾದ ವಿವಾದಗಳಿಂದಾಗಿ ಸಂಬಂಧದಲ್ಲಿ ಉಂಟಾದ ಒಡಕುಗಳು ಸಮಾಧಾನದ ಮಾತುಗಳಿಂದಾಗಿ ಪರಿಹಾರವಾಗುತ್ತದೆ. ಹಣಕಾಸಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯಲಿದೆ.
ಸಿಂಹ
ಮನೆಯಲ್ಲಿನ ಮಂಗಳ ಕಾರ್ಯಕ್ರಮಕ್ಕೆ ಆಪ್ತರ ಸಹಾಯ ನೀವಂದುಕೊಂಡ ಮಟ್ಟಕ್ಕೆ ದೊರೆಯದೆ ಇದ್ದರೂ ಉತ್ತಮವಾಗಿ ಮಾಡುವಿರಿ. ವಿದ್ವಾಂಸರ ಎದುರು ಉಚಿತವಾದ ಮಾತನಾಡಿ ಪ್ರಶಂಸೆಗೆ ಒಳಗಾಗುವಿರಿ.
ಕನ್ಯಾ
ಕೆಲಸಗಳನ್ನು ಸಾಧಿಸಿಕೊಳ್ಳಲೇ ಬೇಕಿದ್ದರೆ ಅವಿರತ ಶ್ರಮ ಅಗತ್ಯ ಮತ್ತು ಅನಿವಾರ್ಯವಾಗುವುದು. ನಿಮ್ಮನ್ನು ನೀವೇ ವಿಮರ್ಶಿಕೊಂಡರೆ ತಪ್ಪುಗಳ ಅರಿವಾಗುವುದು.
ತುಲಾ
ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಇಂದು ಆಪತ್ತು ಉಂಟಾದಾಗ ಹಳೆಯ ಹರಕೆಗಳ ನೆನಪು ಬರಬಹುದು. ಆಹಾರ ಪದಾರ್ಥಗಳ ಅದರಲ್ಲೂ ಸಿಹಿ ತಿಂಡಿಗಳ ಉತ್ಪಾದನೆಯಿಂದ ಲಾಭ ಗಳಿಸುವಿರಿ.
ವೃಶ್ಚಿಕ
ಖರೀದಿಯಲ್ಲಿ ಮೋಸ ಹೋಗುವ ಲಕ್ಷಣವಿರುವುದರಿಂದ ಹೆಚ್ಚಿನ ಗಮನವಿರಲಿ. ಉತ್ತಮ ಹಂತದಲ್ಲಿರುವ ಕಟ್ಟಡ ನಿರ್ಮಾಣವನ್ನು ಅನಿವಾರ್ಯ ಕಾರಣಗಳಿಂದ ನಿಲ್ಲಿಸುವಿರಿ. ವಾತ ಸಂಬಂಧಿ ಕಾಯಿಲೆಗಳು ಆಗಬಹುದು.
ಧನು
ಮನೆಯಿಂದ ದೂರ ಇರುವ ಮಕ್ಕಳ ವರ್ತನೆಗಳು ಇಂದು ಪದೇ ಪದೇ ನೆನಪಾಗುತ್ತದೆ. ಕೆಲಸಗಳು ಸುಲಭವಾಗಿಸಲು ಸ್ನೇಹಿತರೊಬ್ಬರು ನೆರವಾಗಲಿದ್ದಾರೆ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಬಿಟ್ಟುಬಿಡಿ.
ಮಕರ
ಮನರಂಜನೆಗಾಗಿ ತಮಾಷೆಯ ಮಾತುಗಳನ್ನಾಡುವಾಗ ಗುಪ್ತವಾದ ಸಂಗತಿಗಳು ಬಯಲಾಗಬಹುದು. ಕೆಲವರು ನಡೆಸುತ್ತಿರುವ ಕಾನೂನುಬಾಹಿರ ವಿಚಾರಗಳನ್ನು ಬಯಲು ಮಾಡುವಿರಿ.
ಕುಂಭ
ಹಿಂದಿನ ದಿನದ ವಿಶೇಷ ಕಾರ್ಯಕ್ರಮದಲ್ಲಿ ಮಾಡಿದ ಭೋಜನವು ಅಡ್ಡಪರಿಣಾಮವನ್ನು ತೋರಿಸುವ ಸಾಧ್ಯತೆ ಇದೆ. ಗಣಿತಜ್ಞರಿಗೆ ಹಾಗು ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರೆಯುವುದು.
ಮೀನ
ವಿವಾಹದ ವಿಚಾರದಲ್ಲಿ ಕೆಲವೊಂದು ವಿಷಯಗಳ ಬಗ್ಗೆ ನಿಷ್ಠೂರವಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಪಶ್ಚಾತಾಪ ಪಡಬೇಕಾದೀತು. ನಿರುದ್ಯೋಗಿಗಳಿಗೆ ಹಂಗಾಮಿ ನೌಕರಿ ದೊರೆಯುವ ಮಾರ್ಗ ಸಿಗಲಿದೆ.
ADVERTISEMENT
ADVERTISEMENT