ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: 18-2-2024ರಿಂದ 25-2-2024 ರವರೆಗೆ
Published 18 ಫೆಬ್ರುವರಿ 2024, 0:24 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ದೈವವಿದ್ಯದ ಕಡೆಗೆ ಹೆಚ್ಚು ಒಲವು ತೋರುವಿರಿ. ಸಂಗೀತಸಾಧನಗಳನ್ನು ತಯಾರು ಮಾಡುವವರಿಗೆ ಹೆಚ್ಚುಬೇಡಿಕೆ ಬರುತ್ತದೆ.ಧನಾದಾಯವು ನಿಮ್ಮಅಗತ್ಯ ವನ್ನು ಪೂರೈಸುವಷ್ಟಿರುತ್ತದೆ. ನಿಮ್ಮ ಮಾತುಕತೆಗಳಲ್ಲಿ ವ್ಯವಹಾರಿಕತೆ ಎದ್ದು ಕಾಣುತ್ತದೆ. ಆಸ್ತಿಖರೀದಿವಿಷಯ ದಲ್ಲಿ ಸ್ವಲ್ಪಹಿನ್ನಡೆ ಆಗಬಹುದು. ವಿದ್ಯಾರ್ಥಿಗಳಿಗೆ ಈಗ ಮಧ್ಯಮಫಲಿತಾಂಶವಿರುತ್ತದೆ. ಉದ್ಯೋಗದಲ್ಲಿ ತಮ್ಮ ಇಲಾಖ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲವಿರುತ್ತದೆ. ಕೆಲವೊಂದುಆರೋಗ್ಯದ ಸಮ ಸ್ಯೆಯ ಪರಿಹಾರಗಳಿಗೆ ದೈವಾಚರಣೆಯನ್ನು ಮಾಡು ವಿರಿ. ಸಂಗಾತಿಗೆ ಶೀಘ್ರವಾಗಿ ಉದ್ಯೋಗದೊರೆಯುವ ಸಾಧ್ಯತೆಗಳಿರುತ್ತವೆ. ಕೀಲುಗಳ ನೋವು ಇರುವವರು ಹೆಚ್ಚು ಎಚ್ಚರವಹಿಸಿರಿ.ಮಾನವ ಸಂಪನ್ಮೂಲವನ್ನು ಒದಗಿಸುವ ಸಂಸ್ಥೆಗಳಿಗೆ ಹೆಚ್ಚಿನ ಲಾಭವಿರುತ್ತದೆ. ವಿದೇಶಗಳಿಗೆ ವಿಹಾರಕ್ಕಾಗಿ ಹೋಗಿ ಬರಬಹುದು. ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ವೃಷಭ
ವಾರದ ಆರಂಭ ಅತ್ಯಂತ ಸಂತೋಷದಾಯಕ ವಾಗಿರುತ್ತದೆ. ಆದಾಯವು ಚೇತರಿಕೆಯ ಹಂತವನ್ನು ಕಾಣುತ್ತದೆ. ನಿಮ್ಮ ನಡವಳಿಕೆಗಳು ಸಾಕಷ್ಟು ಚುರುಕಾ ಗಿರುತ್ತವೆ. ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಹಿರಿಯರು ಕೋಪಗೊಂಡರೂ ಸಹ ನಂತರ ಗೌರವಿಸುವರು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಕಡಿಮೆ ಯಶಸ್ಸು ಇರುತ್ತದೆ. ಹಣ ನಿರ್ವಹಣೆಯಲ್ಲಿ ಯಶಸ್ವಿಯಾಗಿ ಸಾಲಗಾರ ಆಗುವುದನ್ನು ತಪ್ಪಿಸಿಕೊಳ್ಳುವಿರಿ. ಕೃಷಿ ಆಧಾರಿತ ಉತ್ಪನ್ನಗಳನ್ನು ಮಾರುವವರಿಗೆ ಅಭಿವೃದ್ಧಿ ಇರುತ್ತದೆ. ಸಂಗಾತಿಗೆ ಅನಿರೀಕ್ಷಿತ ಧನಸಹಾಯ ಸಿಗುವ ಸಾಧ್ಯತೆ ಇದೆ. ಕುಟುಂಬಸಮೇತರಾಗಿ ದೈವ ದರ್ಶನಕ್ಕಾಗಿ ಹೋಗಿ ಬರುವ ಸಾಧ್ಯತೆಗಳಿವೆ.ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿ ನೆಲೆಸಿರುವವರಿಗೆ ವಿದ್ಯಾ ಶಾಲೆಗಳನ್ನು ತೆರೆಯುವ ಅವಕಾಶ ದೊರೆಯುತ್ತದೆ.ಧಾರ್ಮಿಕ ಕೆಲಸಗಳಿಗೆ ಹೆಚ್ಚು ಒತ್ತು ಕೊಡುವಿರಿ. ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಮಿಥುನ
, ದೇಹಾಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವಿರಿ. ಧನದಾಯವು ಮಂದಗತಿಯಲ್ಲಿರುತ್ತದೆ. ನಿಮ್ಮ ಕೆಲಸಕಾರ್ಯಗಳಿಗೆ ಹಿರಿಯರು ಅಡ್ಡಿ ಮಾಡುವ ಸಂದರ್ಭವಿದೆ. ಸಂಸಾರದಲ್ಲಿ ಸಣ್ಣಪುಟ್ಟ ಕಿರಿಕಿರಿಗಳಿ ರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಮಾನ್ಯ ಫಲಿತಾಂಶವಿರುತ್ತದೆ. ಹರಿತವಾದ ಆಯುಧಗಳ ಜೊತೆ ಕೆಲಸ ಮಾಡುವವರು ಎಚ್ಚರದಿಂದ ಮಾಡಿರಿ. ಬಿಸಿ ಪದಾರ್ಥಗಳನ್ನು ತಯಾರು ಮಾಡುವವರು ಸಹ ಎಚ್ಚರದಿಂದ ಮಾಡಿರಿ. ಸಂಗಾತಿಮಾಡುವ ವ್ಯವಹಾರ ಗಳಲ್ಲಿ ಲಾಭ ಕಡಿಮೆಯಾಗಬಹುದು. ಕೆಲಸ ಕಾರ್ಯ ಗಳಲ್ಲಿ ಅಡೆತಡೆಗಳು ಎದುರಾಗುತ್ತದೆ. ನ್ಯಾಯವಾದಿ ಗಳಿಗೆ ಉತ್ತಮ ದಾವೇ ದೊರೆತು ಹೆಚ್ಚು ಸಂಪಾದನೆ ಆಗುತ್ತದೆ. ವಿದೇಶದಲ್ಲಿದ್ದು ಓದಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ವ್ಯವ ಹಾರವಾಗುವ ಸಾಧ್ಯತೆ ಇದೆ. ಹಾಗೂ ಪ್ರಕಾಶಕರಿಗೆ ಉತ್ತಮ ಪುಸ್ತಕವನ್ನು ಪ್ರಕಾಶನ ಮಾಡುವ ಯೋಗವಿದೆ. ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕರ್ಕಾಟಕ
ಮೈಯಲ್ಲಿ ಆಲಸೀತನ ತುಂಬಿದ್ದರು ಒಲ್ಲದ ಮನಸ್ಸಿನಿಂದ ಕಾರ್ಯಯೋನ್ಮುಖರಾಗುವಿರಿ ,ಹೀಗಾಗಿ ಕೆಲಸಗಳಲ್ಲಿ ಗೊಂದಲಗಳು ಮೂಡಬಹುದು. ಧನಾ ದಾಯವು ನಿಮ್ಮ ಅಪೇಕ್ಷೆಯಷ್ಟು ಇರುತ್ತದೆ. ಬಂಧುಗಳು ನಿಮ್ಮ ಧರ್ಮತತ್ಪರತೆಗೆ ಬೆರಗಾಗುವರು. ಕೃಷಿ ಮಾಡುವವರಿಗೆ ಆದಾಯ ವೃದ್ಧಿಸುವ ಅವಕಾಶವಿದೆ. ಹಣ್ಣು ತರಕಾರಿ ಬೆಳೆಗಾರರಿಗೆ ಆದಾಯ ಹೆಚ್ಚುತ್ತದೆ. ಸ್ಥಿರಾಸ್ತಿಯನ್ನು ಕೊಳ್ಳಲು ಸಂಗಾತಿ ಹೆಚ್ಚು ಒತ್ತಡ ಹಾಕ ಬಹುದು. ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಅಧ್ಯಯನ ಮಾಡುತ್ತಿರುವವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಪಿತ್ತ ಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಸಂಗಾತಿ ಕಡೆಯಿಂದ ಕೃಷಿ ಉಪಕರಣಗಳನ್ನು ತಯಾರು ಮಾಡಲು ಸಲಹೆ ಮತ್ತು ಧನಸಹಾಯ ಖಂಡಿತವಾಗಿ ದೊರೆಯುತ್ತದೆ. ಉಪಾಧ್ಯಾಯರಿಗೆ ಸೂಕ್ತ ಗೌರವ ದೊರೆಯುತ್ತದೆ. ಕೆಲವರಿಗೆ ಹೆಚ್ಚಿನ ಶ್ರೇಣಿಯ ವೇತನ ಸಹ ದೊರೆಯುವ ಸಾಧ್ಯತೆ ಇದೆ. ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಸಿಂಹ
ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸ ಕಾರ್ಯಗಳನ್ನು ಮಾಡಲು ಹೆಚ್ಚು ಉತ್ಸಾಹ ತೋರುವಿರಿ. ಧನದಾಯವು ಕಡಿಮೆ ಇದ್ದರೂ ಸಹ ಹಣನಿರ್ವಹಣೆ ಮಾಡುವ ಯತ್ನಮಾಡುವಿರಿ. ಧರ್ಮ ವಿದ್ಯೆಗಳಿಂದ ಸಂಪಾದನೆ ಮಾಡುವವರಿಗೆ ಆದಾಯ ಹೆಚ್ಚುವ ಸಂದರ್ಧವಿದೆ. ಸಹೋದರಿಯರಿಗಾಗಿ ಹೆಚ್ಚು ಹಣಖರ್ಚು ಮಾಡಬೇಕಾಗಬಹುದು. ನೀವುಕೊಳ್ಳಲು ತೀರ್ಮಾನಿಸಿರುವ ಆಸ್ತಿಯ ಮೌಲ್ಯವನ್ನು ಸರಿಯಾಗಿ ತಿಳಿಯಿರಿ. ಇಲ್ಲವಾದಲ್ಲಿ ಮೋಸವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಧ್ಯಮ ಯಶಸ್ಸು ಇರುತ್ತದೆ. ಇಲಾಖೆ ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳು ವವರಿಗೆ ಶುಭ ಸಮಾಚಾರವಿರುತ್ತದೆ. ಕೃಷಿಗಾಗಿ ಹೆಚ್ಚು ಹಣ ವಿನಿಯೋಗಿಸುವಿರಿ. ಸಂಸಾರದಲ್ಲಿ ಸಂಗಾತಿಯ ಸ್ವಪ್ರತಿಷ್ಠೆಯಿಂದ ಕಾವೇರಿದ ಮಾತುಗಳಾಗಬಹುದು. ವಿದೇಶಗಳಿಗೆ ರಫ್ತು ಮಾಡುವವರಿಗೆ ಕಾನೂನಿನ ಕಿರಿ ಕಿರಿಗಳು ಕಾಣಿಸಬಹುದು. ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಕನ್ಯಾ
ನಿಮ್ಮ ಕೆಲಸಗಳು ಸರಿಯಾಗಿ ಆಗದೆ ಮನಸ್ಸು ಗೊಂದಲದ ಗೂಡಾಗಬಹುದು. ಧನಾದಾಯವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚು ಶ್ರಮ ಹಾಕುವಿರಿ. ಹಿರಿಯರ ಬಗ್ಗೆ ಟೀಕೆ ಮಾಡಿ ಮುಜುಗರಕ್ಕೆ ಒಳಗಾಗುವಿರಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ಕೆಲವರಿಗೆ ಮಕ್ಕಳಿಂದ ಧನಸಹಾಯ ಇರುತ್ತದೆ, ಕೆಲವರು ಮಕ್ಕಳಿಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಹಿರಿಯರಿಂದ ಸಿಗುತ್ತಿದ್ದ ಸಹಾಯಗಳು ನಿಲ್ಲುವ ಸಾಧ್ಯತೆಗಳಿವೆ. ಸಂಗಾತಿಯ ನಡವಳಿಕೆಯು ನಿಮಗೆ ಕೋಪವನ್ನು ತರಿಸಬಹುದು . ಖರ್ಚು ಹೆಚ್ಚಾದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗ ಬಹುದು. ಹಿರಿಯರೊಡನೆ ಹಣಕಾಸಿನ ವಿಚಾರದಲ್ಲಿ ವಾಗ್ವಾದಗಳಾಗಬಹುದು. ತಂದೆಯಿಂದ ಸ್ವಲ್ಪಮಟ್ಟಿನ ಹಣಕಾಸಿನ ಸಹಾಯ ದೊರೆಯುತ್ತದೆ. ಉದ್ಯೋಗದ ಜಾಗದಲ್ಲಿ ನಿಮ್ಮ ವಿರುದ್ಧ ಗುಂಪುಗಾರಿಕೆ ಏರ್ಪಡಬ ಹುದು. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಲಾಭ ವಿರುತ್ತದೆ. ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ತುಲಾ
ನಿಮ್ಮ ನಡವಳಿಕೆಯಿಂದ ಬಂಧುಗಳನ್ನು ಅಥವಾ ಸ್ನೇಹಿತರನ್ನು ದೂರ ಮಾಡಿಕೊಳ್ಳುವಿರಿ. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಪರಿಚಯದವರಿಂದ ಅಡ್ಡಿ ಇರುತ್ತದೆ. ಕೃಷಿ ಜಮೀನಿನ ವಿಸ್ತರಣೆಯಲ್ಲಿ ಯಶಸ್ವಿಯಾಗುವಿರಿ. ಮೆಕಾನಿಕಲ್ ವಿಭಾಗದಲ್ಲಿ ಕಲಿಯುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಮೂಳೆ ತೊಂದರೆಗಳು ಹೆಚ್ಚು ಕಾಡಬಹುದು. ಚರ್ಮರೋಗಗಳು ಸಹ ಕಾಡುವಸಾಧ್ಯತೆ ಇದೆ. ಸಂಗಾತಿಯಿಂದ ಸ್ವಲ್ಪ ಸಹಕಾರ ದೊರೆಯುತ್ತದೆ .ಆಭರಣ ವ್ಯಾಪಾರದಾರರಿಗೆ ಅವರು ನಿರೀಕ್ಷಿಸಿದಷ್ಟು ವ್ಯಾಪಾರ ಇರುವುದಿಲ್ಲ. ಗೃಹಲಂಕಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಕಡಿಮೆಯಾಗ ಬಹುದು. ಹಾಲಿನ ಉತ್ಪನ್ನಗಳನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಹೈನುಗಾರಿಕೆಯನ್ನು ಮಾಡು ವವರಿಗೆ ಹೆಚ್ಚಿನ ಲಾಭವನ್ನು ನಿರೀಕ್ಷೆ ಮಾಡಬಹುದು. ತಾಯಿಯಿಂದ ನಿಮಗೆ ಸೂಕ್ತ ಸಹಾಯ ದೊರೆಯುತ್ತದೆ. ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ವೃಶ್ಚಿಕ
ದೇಹ ಶಕ್ತಿಗಾಗಿ ವ್ಯಾಯಾಮ ಮಾಡುವಿರಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ಹಿಡಿತ ಸಾಧಿಸಲು ಸಾಕಷ್ಟು ಪ್ರಯತ್ನ ಪಡುವಿರಿ. ಬಂಧುಗಳ ನಡುವೆ ಹೊಂದಾಣಿ ಕೆಗಾಗಿ ಪ್ರಯತ್ನ ಪಡುವಿರಿ. ಆಸ್ತಿ ವಿಚಾರದ ಇದ್ದ ದಾವೆಗಳಲ್ಲಿ ನಿಮಗೆ ಶುಭ ಸೂಚನೆ ದೊರೆಯುತ್ತದೆ. ಮಕ್ಕಳನ್ನು ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳಿಸಲು ಏರ್ಪಾಡು ಮಾಡುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಿ ಅದಕ್ಕಾಗಿ ಹೆಚ್ಚು ಖರ್ಚನ್ನು ಮಾಡುವಿರಿ. ಪ್ರೀತಿ ಪ್ರೇಮದಲ್ಲಿರುವವರಿಗೆ ಅದರ ಯಶಸ್ಸು ಈಗ ದೊರೆಯುತ್ತದೆ. ಗಣಿಗಾರಿಕೆ ಮಾಡುವ ವರಿಗೆ ಸ್ವಲ್ಪ ಕಾರ್ಮಿಕರ ಸಮಸ್ಯೆ ಆಗಬಹುದು. ವೃತ್ತಿ ಯಲ್ಲಿ ಹಿರಿಯ ಅಧಿಕಾರಿಗಳ ಸಹಾಯ ದೊರೆತು ನಿಮ್ಮ ಕೆಲಸ ಸಲೀಸಾಗುತ್ತದೆ. ಧರ್ಮಸಂಸ್ಥೆಗಳನ್ನು ನಡೆಸುವವರಿಗೆ ಸಮಾಜದಿಂದ ದೇಣಿಗೆ ಬರುತ್ತದೆ. ವೈಯಕ್ತಿಕ ಸಂತೋಷಕ್ಕಾಗಿ ಸ್ವಲ್ಪ ಹಣ ಖರ್ಚು ಮಾಡುವಿರಿ. ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಧನು
ಮನಸ್ಸಿನಲ್ಲಿ ಸಂತೋಷವಿರುತ್ತದೆ. ಅಪ್ಪಿ ತಪ್ಪಿ ಮಾತನಾಡುವಾಗ ವ್ಯತ್ಯಾಸದ ಶಬ್ದಗಳು ಬಂದರೂ ಸಹ ಯಾರು ಗಮನಿಸುವುದಿಲ್ಲ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಬಂಧುಗಳು ನಿಮ್ಮ ಬೆಳವಣಿಗೆ ಯನ್ನು ಕಂಡು ಹೊಟ್ಟೆ ಉರಿ ಪಡುವರು. ನಿಮ್ಮ ಚಾಣಾಕ್ಷತೆಯಿಂದ ಹಿರಿಯ ಅಧಿಕಾರಿಗಳಿಗೆ ಅಥವಾ ರಾಜಕೀಯ ನಾಯಕರುಗಳಿಗೆ ಪೆಟ್ಟು ಕೊಡುವಿರಿ. ಆಸ್ತಿಯಲ್ಲಿನ ಕಲಹಗಳಿಗೆ ರಾಜಿ ಸೂತ್ರವೇ ಪರಿಹಾರ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಭಾಷಾಪಂಡಿತರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಬಾಯಿ ಹುಣ್ಣು ಕಾಣಿಸಬಹುದು. ವ್ಯವಹಾರದಲ್ಲಿಸಂಗಾತಿಯ ಸಲಹೆಗಳು ಬಹಳ ಪ್ರಯೋಜನಕಾರಿಯಾಗುತ್ತವೆ.. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ವ್ಯವಹಾರ ನಿಧಾನ ವಾಗಬಹುದು.ತಾಯಿಯು ನಿಮ್ಮಕೆಲಸಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುವರು. ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ ಇರುತ್ತದೆ. ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಮಕರ
ನಿಮ್ಮ ಮುಖದಲ್ಲಿ ಗಾಂಭೀರ್ಯತೆ ತುಂಬಿರುತ್ತದೆ, ಹಾಗೆ ಗೌರವ ಘನತೆಯ ಬಗ್ಗೆ ಹೆಚ್ಚು ಎಚ್ಚರ ವಹಿಸುವಿರಿ. ಧನಾದಾಯವು ಚೇತರಿಕೆಯತ್ತ ಹೊರಳುತ್ತದೆ. ಬಂಧುಗಳು ಮಾಡುವ ಷಡ್ಯಂತ್ರವನ್ನು ಸಮರ್ಪಕವಾಗಿ ನಿವಾರಿಸುವಿರಿ. ಸ್ಥಿರಾಸ್ತಿ ಕೊಳ್ಳಲು ಬೇಕಾದ ಹಣದ ಮೂಲಗಳು ಗೋಚರಿಸುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯದ ಸುಧಾರಣೆಯಾಗುತ್ತದೆ. ಸಂಗಾತಿಯಿಂದ ಧನಸಹಾಯವನ್ನು ನಿರೀಕ್ಷೆ ಮಾಡಬಹುದು. ಪ್ರೇಮ ಪ್ರಸಂಗಗಳಲ್ಲಿರುವವರಿಗೆ ಹಿರಿಯರಿಂದ ವಿರೋಧ ಬಂದರೂ ನಂತರ ಒಪ್ಪಿಗೆ ಸಿಗುತ್ತದೆ. ಹಿರಿಯರಿಂದ ನಿಮ್ಮ ವ್ಯವಹಾರಗಳಿಗೆ ಸಲಹೆಗಳ ಜೊತೆ ಧನ ಸಹಕಾರ ಸಿಗುವ ಸಾಧ್ಯತೆ ಇದೆ. ಕೃಷಿ ಪಂಡಿತರಿಗೆ ಬೇಡಿಕೆ ಬರುತ್ತದೆ. ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕುಂಭ
ಸಮಾಜದಲ್ಲಿ ಹಿರಿಯರಿಗೆ ಪ್ರಾತಿನಿಧ್ಯತೆ ಸಿಗುತ್ತದೆ.ಯುವಕರ ಪ್ರತಿಷ್ಠೆಯ ಮಾತುಗಳುವಾಪಸ್ ಅವರಿಗೆ ಬರುವ ಸಾಧ್ಯತೆ ಇದೆ. ಧನದಾಯವು ಈಗ ಮಂದಗತಿಯಲ್ಲಿರುತ್ತದೆ. ಸ್ಥಿರಾಸ್ತಿ ಮಾಡಿಕೊಳ್ಳುವ ವಿಚಾರದಲ್ಲಿ ಮುಂದುವರೆಯಬಹುದು. ವಿದ್ಯಾರ್ಥಿ ಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ತೆರಿಗೆ ತಜ್ಞರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಆಸ್ತಿವಿಚಾರದಲ್ಲಿ ಹೆಚ್ಚು ಹಣಪೋಲಾಗುವಸಾಧ್ಯತೆ ಇದೆ, ಸ್ವಲ್ಪಎಚ್ಚರ ವಹಿ ಸಿರಿ. ಸಂಗಾತಿಯು ನಿಮ್ಮಮೇಲೆ ಮುನಿಸಿಕೊಂಡರೂ ಸಹ ನಿಮ್ಮಸಹಾಯಕ್ಕೆ ನಿಲ್ಲುವರು. ತಂದೆಯಿಂದ ಸ್ವಲ್ಪ ಧನ ಸಹಾಯಪಡೆಯುವಿರಿ. ವೃತ್ತಿಯಲ್ಲಿ ಸಾಕಷ್ಟುಗೊಂದಲಗಳು ಮೂಡುತ್ತವೆ. ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಹೈನುಗಾರಿಕೆ ಮಾಡುವವರಿಗೆ ಪಶುಗಳ ಮಾರಾಟದಿಂದ ಹೆಚ್ಚಿನ ಲಾಭ ಬರುತ್ತದೆ. ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಮೀನ
ಹೆಚ್ಚು ಮುಖಲಂಕಾರದ ವಸ್ತುಗಳನ್ನು ಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ಬಹಳ ಚುರುಕಾಗಿ ಓಡಾಡಿ ಕೆಲಸ ಮಾಡಿದಂತೆ ತೋರ್ಪಡಿಕೆ ಮಾಡಿಕೊಳ್ಳುವಿರಿ. ತಾಯಿಯು ನಿಮ್ಮ ಹೇಳಿಕೆ ಮಾತುಗಳನ್ನು ಸಾಕಷ್ಟು ನಂಬುವರು. ಸ್ತ್ರೀಯರಿಂದ ಹೆಚ್ಚು ಸಹಕಾರಗಳು ಈಗ ನಿಮಗೆ ದೊರೆಯುತ್ತವೆ. ಅದಿರು ವ್ಯಾಪಾರ ಮಾಡುವ ವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಸರ್ಕಾರಿ ಆಡಿಟ್ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹದ ಹಣ ಸಿಗುತ್ತದೆ. ಸಂಗಾತಿಯ ಆರೋಗ್ಯ ಸುಧಾರಣೆಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕಾಗುತ್ತದೆ. ವೃತ್ತಿಯಲ್ಲಿ ನೀವೇ ಮಾಡಿಕೊಂಡ ಗೊಂದಲಗಳಿಂದ ಹಿತಶತ್ರುಗಳು ಜಾಸ್ತಿ ಯಾಗುವವರು.ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ದಿನಸಿ ವ್ಯಾಪಾರಿಗಳಿಗೆ ಈಗ ಸಾಕಷ್ಟು ಲಾಭವಿರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಹಿನ್ನಡೆ ಆಗುವ ಸಂದರ್ಭವಿದೆ. ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)