<p><strong>ಅಹಮದಾಬಾದ್:</strong> ಟೀಂ ಇಂಡಿಯಾ ಆಟಗಾರರು ಅಹಂಕಾರ ಬಿಟ್ಟು, ಪಿಚ್ಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.</p><p>ಟಿ–20 ವಿಶ್ವಕಪ್ನ ಸೂಪರ್–8 ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಹೀನಾಯ ಸೋಲನುಭವಿಸಿತ್ತು. ಅದರ ನಂತರ, ಭಾರಿ ಟೀಕೆ ವ್ಯಕ್ತವಾಗುತ್ತಿದೆ. </p><p>ಭಾರತದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಅನ್ನು ಗಮನಿಸಬೇಕು. ಆರಂಭಿಕ ವಿಕೆಟ್ ಬಿದ್ದರೂ ಕೂಡ ಮಿಲ್ಲರ್ ಹಾಗೂ ಬ್ರೇವಿಸ್ 97 ರನ್ಗಳ ಜೊತೆಯಾಟವಾಡಿದರು. ಆ ಶೈಲಿಯ ಆಟವನ್ನು ಟೀಂ ಇಂಡಿಯಾದ ಬ್ಯಾಟರ್ಗಳು ಆಡಬೇಕಿದೆ ಎಂದು ಹೇಳಿದ್ದಾರೆ. </p><p>ಆದರೆ, ಭಾರತದ ಬ್ಯಾಟರ್ಗಳು ಪಿಚ್ಗೆ ಅನುಗುಣವಾಗಿ ಆಡಲಿಲ್ಲ. ಪ್ರತಿಯೊಂದು ಎಸೆತವನ್ನು ಬೌಂಡರಿ ಗೆರೆ ದಾಟಿಸಲು ಪ್ರಯತ್ನಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಬ್ಯಾಟರ್ಗಳ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. </p><p>ಪ್ರತಿಬಾರಿಯೂ ಪವರ್ ಪ್ಲೇನಲ್ಲಿ 70 ರನ್ ಗಳಿಸುವ ಅವಶ್ಯಕತೆಯಿಲ್ಲ. ಅಹಮದಾಬಾದ್ನಂತಹ ಪಿಚ್ನಲ್ಲಿ 55 ರಿಂದ 60 ರನ್ ಕೂಡ ಉತ್ತಮ ಮೊತ್ತ. ಜಿಂಬಾಬ್ವೆ ತಂಡದಲ್ಲಿ ಹೆಚ್ಚಿನ ಎಡಗೈ ಬ್ಯಾಟರ್ಗಳಿರುವ ಕಾರಣ ಮುಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಹಮದಾಬಾದ್:</strong> ಟೀಂ ಇಂಡಿಯಾ ಆಟಗಾರರು ಅಹಂಕಾರ ಬಿಟ್ಟು, ಪಿಚ್ಗೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿಗೆ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.</p><p>ಟಿ–20 ವಿಶ್ವಕಪ್ನ ಸೂಪರ್–8 ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ಗಳ ಹೀನಾಯ ಸೋಲನುಭವಿಸಿತ್ತು. ಅದರ ನಂತರ, ಭಾರಿ ಟೀಕೆ ವ್ಯಕ್ತವಾಗುತ್ತಿದೆ. </p><p>ಭಾರತದ ಬ್ಯಾಟರ್ಗಳು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಅನ್ನು ಗಮನಿಸಬೇಕು. ಆರಂಭಿಕ ವಿಕೆಟ್ ಬಿದ್ದರೂ ಕೂಡ ಮಿಲ್ಲರ್ ಹಾಗೂ ಬ್ರೇವಿಸ್ 97 ರನ್ಗಳ ಜೊತೆಯಾಟವಾಡಿದರು. ಆ ಶೈಲಿಯ ಆಟವನ್ನು ಟೀಂ ಇಂಡಿಯಾದ ಬ್ಯಾಟರ್ಗಳು ಆಡಬೇಕಿದೆ ಎಂದು ಹೇಳಿದ್ದಾರೆ. </p><p>ಆದರೆ, ಭಾರತದ ಬ್ಯಾಟರ್ಗಳು ಪಿಚ್ಗೆ ಅನುಗುಣವಾಗಿ ಆಡಲಿಲ್ಲ. ಪ್ರತಿಯೊಂದು ಎಸೆತವನ್ನು ಬೌಂಡರಿ ಗೆರೆ ದಾಟಿಸಲು ಪ್ರಯತ್ನಿಸುವ ಮೂಲಕ ವಿಕೆಟ್ ಒಪ್ಪಿಸಿದರು. ಬ್ಯಾಟರ್ಗಳ ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ. </p><p>ಪ್ರತಿಬಾರಿಯೂ ಪವರ್ ಪ್ಲೇನಲ್ಲಿ 70 ರನ್ ಗಳಿಸುವ ಅವಶ್ಯಕತೆಯಿಲ್ಲ. ಅಹಮದಾಬಾದ್ನಂತಹ ಪಿಚ್ನಲ್ಲಿ 55 ರಿಂದ 60 ರನ್ ಕೂಡ ಉತ್ತಮ ಮೊತ್ತ. ಜಿಂಬಾಬ್ವೆ ತಂಡದಲ್ಲಿ ಹೆಚ್ಚಿನ ಎಡಗೈ ಬ್ಯಾಟರ್ಗಳಿರುವ ಕಾರಣ ಮುಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>