ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
10/03/2024 - 16/03/2024
ವಾರ ಭವಿಷ್ಯ: ಈ ರಾಶಿಯವರ ಸಂಗಾತಿಯ ಸಲಹೆಗಳಿಂದ ಆದಾಯ ಹೆಚ್ಚುತ್ತದೆ
Published 16 ಮಾರ್ಚ್ 2024, 23:40 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಹೆಚ್ಚಿನ ಗೌರವಕ್ಕಾಗಿ ಆಸೆ ಪಡುವಿರಿ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ಅತಿ ಚುರು ಕಾಗಿ ಕೆಲಸ ಮಾಡಿ ಕೆಲಸ ಕಾರ್ಯಗಳನ್ನು ಪೂರ್ಣ ಗೊಳಿಸುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಸಾಕಷ್ಟು ಮುನ್ನಡೆ ಸಾಧಿಸುವಿರಿ. ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚುಮಾಡುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಶ್ರಮಕ್ಕೆ ತಕ್ಕಫಲ ಮಾತ್ರದೊರೆಯುತ್ತದೆ.ಹೊಟ್ಟೆಯಲ್ಲಿ ಗೆಡ್ಡೆಯ ರೀತಿ ಆರೋಗ್ಯ ವ್ಯತ್ಯಾಸಗಳು ಕೆಲವರಿಗೆ ಕಾಣಬಹುದು,ಇವರಿಗೆ ಸಾಂಪ್ರದಾಯಕ ಔಷಧಿಗಳು ಹೆಚ್ಚುಪರಿಣಾಮ ಬೀರುತ್ತವೆ. ಸಂಗಾತಿಯ ಮಾತಿನಲ್ಲಿ ವ್ಯತ್ಯಾಸವಿದ್ದರೂ ಸಹ ಅದಕ್ಕೆ ಹೆಚ್ಚು ಗಮನಕೊಡುವ ಅಗತ್ಯವಿಲ್ಲ.ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಗಳಿವೆ. ಟೈಲರಿಂಗ್ ಕೆಲಸ ಮಾಡುವ ಮಹಿಳೆ ಯರಿಗೆ ಹೆಚ್ಚು ಕೆಲಸದೊರೆತು ಆದಾಯ ಹೆಚ್ಚುತ್ತದೆ. ಕ್ರೀಡೆಗೆ ಬೇಕಾದ ಕ್ರೀಡಾವಸ್ತುಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಅಶ್ವಿನಿ ಭರಣಿ ಕೃತಿಕ
ವೃಷಭ
ಕಲಾವಂತಿಕೆಯ ಕಡೆ ಹೆಚ್ಚು ಗಮನ ಕೊಡುವಿರಿ. ಉತ್ತಮವಾಗಿ ಮಾತನಾಡಿ ವ್ಯವಹಾರದಲ್ಲಿ ಮುನ್ನಡೆ ಸಾಧಿಸುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿರು ತ್ತದೆ. ಬಂಧುಗಳ ನಡುವೆ ಜಿಜ್ಞಾಸಹೆಚ್ಚಾಗುವ ಸಾಧ್ಯತೆ ಗಳಿವೆ. ಸ್ಥಿರಾಸ್ತಿ ಒದಗಿ ಬಂದರೂ ಸಹ ಅದರ ಮೂಲ ದಾಖಲೆಗಳಲ್ಲಿ ಸಾಕಷ್ಟುಗೊಂದಲಗಳಿರುತ್ತವೆ. ಈಗ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಕಡಿಮೆ ಯಶಸ್ಸು ಇರುತ್ತದೆ. ಶೀತಬಾಧೆ ಮತ್ತು ಕಣ್ಣಿನ ತೊಂದರೆ ಇರುವ ವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಗೆ ಹಿರಿಯರ ಆಸ್ತಿ ಬರುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಎಚ್ಚರಿಕೆ ಪಡೆಯುವ ಸಾಧ್ಯತೆ ಇದೆ. ಹಿರಿಯರ ಆಸ್ತಿಯಲ್ಲಿ ಪಾಲು ದೊರೆಯಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚು ತ್ತದೆ. ಮಠಾಧೀಶರುಗಳಿಗೆ ಸಮಾಜದಿಂದ ಹೆಚ್ಚಿನ ಗೌರವ ದೊರೆಯುತ್ತದೆ.ಕೃಷಿಯಿಂದ ಸಾಮಾನ್ಯ ಆದಾಯವಿರುತ್ತದೆ. ಕೃತಿಕಾ2 3 4 ರೋಹಿಣಿ ಮೃಗಶಿರಾ1 2
ಮಿಥುನ
ವಾರದ ಆರಂಭ ತುಂಬಾ ಆನಂದದಾಯಕ ವಾಗಿರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಬಂಧುಗಳನಡುವೆ ಸ್ವಲ್ಪ ಜಿಜ್ಞಾಸೆಮೂಡ ಬಹುದು. ಆಸ್ತಿ ವಿಚಾರದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣುವುದಿಲ್ಲ. ವಿದ್ಯಾರ್ಥಿಗಳಿಗೆ ಮಧ್ಯಮಗತಿಯ ಫಲಿತಾಂಶ ದೊರೆಯುತ್ತದೆ. ಕೃಷಿಯಲ್ಲಿ ಹೆಚ್ಚುಸಾಧನೆ ಯನ್ನು ಮಾಡಬಹುದು.ಹರಿತವಾದಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ಪ್ರೇಮಿಗಳ ಪ್ರೇಮವೂ ಉತ್ತಮ ಫಲಿತಾಂಶದತ್ತ ತಿರುಗುತ್ತದೆ. ಸಂಗಾತಿಯ ಸಲಹೆಗಳಿಂದ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಹಣಕಾಸಿನ ವ್ಯವಹಾರ ವನ್ನು ಮಾಡುವವರಿಗೆ ಲಾಭವಿರುತ್ತದೆ.ಮಹಿಳೆಯರ ಸಿದ್ಧ ಉಡುಪುಗಳನ್ನು ತಯಾರಿಸುವವರಿಗೆ ನಿರೀಕ್ಷಿತ ವ್ಯಾಪಾರ ಇರುವುದಿಲ್ಲ. ಗಣಿಗಾರಿಕೆಯನ್ನು ಮಾಡುವ ವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3
ಕರ್ಕಾಟಕ
ಒಂದು ರೀತಿಯ ಜಿಗುಪ್ಸೆ ಈ ವಾರ ನಿಮ್ಮನ್ನು ಕಾಡಬಹುದು. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಡವಳಿಕೆಯಲ್ಲಿ ಸ್ವಲ್ಪ ಆಲಸೀತನ ವನ್ನು ಕಾಣಬಹುದು. ಸ್ಥಿರಾಸ್ತಿಯ ವಿಚಾರದಲ್ಲಿ ಸ್ವಲ್ಪ ಮುನ್ನಡೆ ಸಾಧಿಸಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ಹಣಕಾಸಿನ ಕೊರತೆ ಕಾಡಬಹುದು. ಉದರ ಸಂಬಂಧಿ ಕಾಯಿಲೆ ಗಳು ಕೆಲವರನ್ನು ಕಾಡಬಹುದು. ಸಂಗಾತಿಯ ನಡವ ಳಿಕೆಯಲ್ಲಿ ವಿರೋಧಾಬಾಸಗಳು ಕಂಡು ಬರುತ್ತವೆ. ತಂದೆಯ ವ್ಯಾಪಾರಗಳಲ್ಲಿ ನಿಮಗೆ ಸ್ಥಾನ ಸಿಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಆಗುತ್ತವೆ. ಉದ್ಯಮದಾರರು ತಮ್ಮ ಎಲ್ಲಾ ವ್ಯವಹಾರದ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಬ ಹುದು. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಕೃಷಿ ಬಳಕೆಗೆ ಸಂಬಂಧಿತ ವಸ್ತುಗಳನ್ನು ಮಾರುವವರಿಗೆ ಲಾಭವಿರು ತ್ತದೆ. ಕರಿದ ತಿಂಡಿಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚಿನ ಲಾಭವಿರುತ್ತದೆ. ಪುನರ್ವಸು 4 ಪುಷ್ಯ ಆಶ್ಲೇಷ
ಸಿಂಹ
ಒಂದು ರೀತಿಯ ದ್ವಂದ್ವ ನಡವಳಿಕೆಗಳು ನಿಮ್ಮಲ್ಲಿರುತ್ತವೆ. ಇದರಿಂದ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ವ್ಯತ್ಯಾಸಗಳಾಗಬಹುದು. ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ. ಬಂಧುಗಳೇ ನಿಮ್ಮ ಕೆಲಸ ಕಾರ್ಯಗಳಿಗೆ ಸಹಾಯ ಮಾಡಿದರು ಸಹ ಕೆಲ ವೊಮ್ಮೆ ವಿರೋಧಾಭಾಸಗಳು ಆಗುತ್ತದೆ. ನವೀನ ರೀತಿಯ ಕೃಷಿಯನ್ನು ಮಾಡುವವರಿಗೆ ಸಾಕಷ್ಟು ಸಹಾಯ ಧನ ಮತ್ತು ಸಲಹೆಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಕೆಲವರಿಗೆ ಮೂಳೆ ತೊಂದರೆಗಳು ಅಥವಾ ಪಿತ್ತೋಷ್ಣ ಗಳು ಕಾಣಿಸಬಹುದು. ಸಂಗಾತಿಯ ನಡವಳಿಕೆಗಳು ನಿಮಗೆ ಸಹಕಾರಿಯಾಗುತ್ತವೆ. ವ್ಯಾಪಾರ ವ್ಯವಹಾರ ಗಳಲ್ಲಿ ಆದಾಯ ಕಡಿಮೆ ಇದ್ದರೂ ನಷ್ಟವಿರುವುದಿಲ್ಲ. ಗಣಿಗಾರಿಕೆಗಾಗಿ ಅರ್ಜಿಸಲ್ಲಿಸಿದ್ದವರಿಗೆ ಅನುಕೂಲತೆ ಗಳಾಗುತ್ತವೆ. ಕೀಲುಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1
ಕನ್ಯಾ
ವಾರದ ಆರಂಭದಲ್ಲಿ ಬಹಳಷ್ಟು ಆಲಸಿತನ ಇರುತ್ತದೆ. ಧನಾದಾಯವು ಮಂದಗತಿಯ ಲ್ಲಿರುತ್ತದೆ. ಬಂಧುಗಳಿಂದ ಅಥವಾ ಒಡಹುಟ್ಟಿದವರಿಂದ ಕೆಲಸ ಕಾರ್ಯಗಳಿಗೆ ಅಡ್ಡಿಬರುವ ಸಾಧ್ಯತೆ ಇದೆ. ಸ್ಥಿರಾಸ್ತಿ ಯನ್ನು ಮಾಡಲು ಹೊಂದಿಸಿದ್ದ ಹಣ ಬೇರೆ ಕಾರಣಕ್ಕೆ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು ಇರುತ್ತದೆ. ವಾಹನ ಚಲಾವಣೆ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಿರಿ. ಕೆಲವರ ದುಡಿದ ಹಣ ಸಾಲ ತೀರಿ ಸಲು ಬಳಕೆಯಾಗುತ್ತದೆ. ಸಂಗಾತಿಯು ವ್ಯವಹಾರಗಳಲ್ಲಿ ಮುತುವರ್ಜಿವಹಿಸಿ ಸಂಪಾದನೆ ಮಾಡುವರು. ಹಣಕಾಸಿನ ವ್ಯವಹಾರ ಮಾಡುವವರಿಗೆ ಸ್ವಲ್ಪ ನಷ್ಟ ವಿರುತ್ತದೆ. ಮಕ್ಕಳಿಗಾಗಿ ಹಣ ಖರ್ಚುಮಾಡಬೇ ಕಾಗ ಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿಯ ಪ್ರಗತಿ ಇರುತ್ತದೆ. ಹೈನುಗಾರಿಕೆ ಮಾಡುವವರಿಗೆ ಆದಾಯ ಕಡಿಮೆಯಾಗಿ ಅನಿರೀಕ್ಷಿತ ಖರ್ಚುಗಳು ಬರಬಹುದು. ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2
ತುಲಾ
ನಿಮ್ಮ ಅನಿಶ್ಚಿತತೆಯ ಫಲವಾಗಿ ನೀವು ಮುಜುಗರಕ್ಕೆ ಒಳಗಾಗುವಿರಿ. ಇದರಿಂದ ಕೆಲವು ಸ್ಥಾನ ಗಳು ಕೈತಪ್ಪಿಸಬಹುದು. ಧನಾದಾಯವು ಮಂದಗತಿ ಯಲ್ಲಿರುತ್ತದೆ. ಹಿರಿಯರ ಜೊತೆ ಉತ್ತಮ ಸ್ನೇಹ ಪಡೆ ಯಲು ಪ್ರಯತ್ನ ಪಡುವಿರಿ. ನಿಮ್ಮ ಕೆಲಸ ಕಾರ್ಯಗ ಳಿಗೆ ಹಿರಿಯರ ಸಹಕಾರ ದೊರೆಯಬಹುದು. ಆಸ್ತಿ ಮಾಡುವ ವಿಚಾರದಲ್ಲಿ ಹಿಂಜರಿಕೆ ಉಂಟಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಕಡಿಮೆ ಇರುತ್ತದೆ. ಕೃಷಿ ವಿಧ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ರಕ್ತ ಸಂಬಂಧಿ ಕಾಯಿಲೆಗಳಿರುವವರು ಹೆಚ್ಚು ಎಚ್ಚರ ವಹಿ ಸಬೇಕು. ಸಂಗಾತಿಯ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ಲೇವಾದೇವಿ ಮಾಡುವುದು ಅಷ್ಟು ಒಳಿತಲ್ಲ. ಸಂಸಾರ ದಲ್ಲಿ ಕೆಲವು ಕಿರಿಕಿರಿಗಳಿರುತ್ತವೆ. ಮಕ್ಕಳಿಗಾಗಿ ಖರ್ಚು ಮಾಡಬೇಕಾಗುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಚಿತ್ತಾ 3 4 ಸ್ವಾತಿ ವಿಶಾಖ 1 2 3
ವೃಶ್ಚಿಕ
ಕಟ್ಟು ಮಸ್ತ ಆದ ದೇಹದ ಬೆಳವಣಿಗೆಯ ಬಗ್ಗೆ ಹೆಚ್ಚು ಗಮನ ಕೊಡುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿದ್ದರೂ ಹೆಚ್ಚಿನ ಖರ್ಚು ಒದಗಿ ಬರುತ್ತದೆ. ನಿಮಗೆ ಮೋಸಮಾಡಿದವರನ್ನು ಬಗ್ಗು ಬಡಿಯುವ ಪ್ರಯತ್ನಕ್ಕೆ ಕೈ ಹಾಕುವಿರಿ.ಕೃಷಿಕರಿಗೆ ಆದಾಯ ಹೆಚ್ಚು ತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಆಹಾರಸಂಬಂಧಿತ ಅನಾರೋಗ್ಯಗಳುಬರುವಸಾಧ್ಯತೆ ಗಳಿವೆ. ತೆರಿಗೆತಜ್ಞರಿಗೆ ವಿದೇಶಿ ಕಂಪನಿ ಕೆಲಸಮಾಡಲು ಅವಕಾಶ ದೊರೆಯಬಹುದು. ಸಂಗಾತಿಯಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಸೂಕ್ತ ಸಹಕಾರ ಮತ್ತು ಧನ ಸಹಾಯ ದೊರೆಯುವ ಸಾಧ್ಯತೆಗಳಿವೆ. ತಂದೆಯಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಇದೆ. ಉದ್ಯೋಗ ದಲ್ಲಿ ಹೆಚ್ಚಿನ ಸ್ಥಾನಮಾನ ಸಿಗುವ ಲಕ್ಷಣಗಳಿವೆ. ಈಗ ಧಾರ್ಮಿಕಗುರುಗಳಿಗೆ ಸಮಾಜದಿಂದಸೂಕ್ತ ಸಹಕಾರ ದೊರೆಯುತ್ತದೆ. ಸಂಗಾತಿಯ ಮುಖ ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವಿಶಾಖಾ 4 ಅನುರಾಧ ಜೇಷ್ಠ
ಧನು
ಬಹಳ ಗಾಂಭೀರ್ಯದ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಕಡಿಮೆ ಆದಾಯವಿದ್ದರೂ ಸಹ ಹಣವನ್ನು ಸರಿಯಾಗಿ ನಿರ್ವಹಣೆಮಾಡುವಿರಿ.ಶತ್ರುಗಳನ್ನುಮಟ್ಟ ಹಾಕಲು ಬುದ್ಧಿವಂತಿಕೆ ಮತ್ತು ದೇಹ ಬಲವನ್ನು ಸರಿ ಯಾಗಿ ಬಳಸುವಿರಿ. ವಿದೇಶದಲ್ಲಿರುವವರು ಆಸ್ತಿ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ.ವಿದ್ಯಾರ್ಥಿ ಗಳಿಗೆ ನಿರೀಕ್ಷಿತ ಯಶಸ್ಸು ಖಂಡಿತ ದೊರೆಯುತ್ತದೆ. ಸ್ತ್ರೀಯರೊಡನೆ ಹಣಕಾಸಿನ ವ್ಯವಹಾರಗಳು ಅಷ್ಟು ಒಳಿತಲ್ಲ ,ಇದು ಗಲಾಟೆಗಳಿಗೆ ಕಾರಣವಾಗಬಹುದು. ಪ್ರೇಮಿಗಳಿಗೆ ಪ್ರೇಮ ಯಶಸ್ವಿಯಾಗಿ ವಿವಾಹ ಆಗುವ ಸಾಧ್ಯತೆಗಳಿವೆ. ತಾಯಿಯು ನಿಮ್ಮಮೇಲೆ ಸಿಟ್ಟಾದರೂ ಸಹಕಾರ ನೀಡುವವರು. ವೃತ್ತಿಯಲ್ಲಿ ನಿಮಗೆ ಹೆಸರು ಬರುವ ಸಾಧ್ಯತೆ ಇದೆ. ಸಾಂಪ್ರದಾಯಿಕ ಉಡುಪುಗಳನ್ನು ಮಾರಾಟಮಾಡುವವರಿಗೆ ಆದಾಯಹೆಚ್ಚುತ್ತದೆ. ಮೂಲ ಪೂರ್ವಾಷಾಢ ಉತ್ತರಾಷಾಢ 1
ಮಕರ
ಶೌರ್ಯವು ಇವರ ನಿಮ್ಮಲ್ಲಿ ಮೈಗೂಡಿರುತ್ತದೆ. ಸಾಹಸ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ನಿಮ್ಮಲ್ಲಿ ಹಠಹಿಡಿದು ಸಾಧಿಸುವ ಛಲವಿರುತ್ತದೆ. ಆಸ್ತಿಕೊಳ್ಳುವ ವಿಚಾರದಲ್ಲಿ ಮುಂದುವರೆಯಬಹುದು. ವಿದ್ಯಾರ್ಥಿ ಗಳಿಗೆ ನಿರೀಕ್ಷೆಯ ಹತ್ತಿರಕ್ಕೆ ಫಲಿತಾಂಶ ಬರುತ್ತದೆ. ಶೀತ ಭಾದೆ ಕೆಲವರನ್ನು ಕಾಡಿಸಬಹುದು. ಅಲಂಕಾರಿಕ ವಸ್ತುಗಳಿಗಾಗಿ ಹಣ ಖರ್ಚಾಗುತ್ತದೆ. ಕೆಲವರ ಪ್ರೇಮ ಪ್ರಸಂಗಗಳು ಹಳಸಬಹುದು. ತಂದೆಯು ಧಾರ್ಮಿಕ ವಾಗಿ ನಿಮ್ಮನ್ನು ಬೆಂಬಲಿಸುವರು. ವೃತ್ತಿಯಲ್ಲಿ ಕಿರಿಕಿರಿ ಗಳಿದ್ದರೂ ವೃತ್ತಿ ಸಮನಾಗಿ ಸಾಗುತ್ತದೆ. ಕೃಷಿಕರಿಗೆ ಹೆಚ್ಚಿನ ಲಾಭವಿರುತ್ತದೆ. ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ದೈವ ಕಾರ್ಯಗಳಿಗಾಗಿ ಹೆಚ್ಚು ಆಸಕ್ತಿ ವಹಿಸುವಿರಿ. ದೇಹದಾಡ್ಯತೆಯ ಶಾಲೆಗಳನ್ನು ನಡೆಸುವವರಿಗೆ ಹೆಚ್ಚು ಆದಾಯವಿರುತ್ತದೆ. ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2
ಕುಂಭ
ಹಿರಿಯರಿಗೆ ಸಮಾಜದಿಂದ ಹೆಚ್ಚು ಗೌರವ ದೊರೆಯುತ್ತದೆ. ಇವರು ಶಾಂತ ಚಿತ್ತರಾಗಿ ಸಮಾಜದ ಕೆಲಸವನ್ನು ಮಾಡುವರು. ಧನಾದಾಯವು ಏರಿಕೆಯ ಹಾದಿಯಲ್ಲಿರುತ್ತದೆ. ಅತ್ಯಂತಚುರುಕಾಗಿ ಕೆಲಸ ಮಾಡಿ ಎಲ್ಲರಿಂದ ಶಭಾಷ್ಗಿ ಗಿರಿ ಪಡೆಯುವಿರಿ. ಸ್ವಪ್ರಯತ್ನ ದಿಂದ ಆಸ್ತಿ ಮಾಡಲು ಮುಂದಾಗುವಿರಿ. ವಿದ್ಯಾರ್ಥಿಗ ಳಿಗೆ ಅಧ್ಯಯನದಲ್ಲಿಯಶಸ್ಸುಇರುತ್ತದೆ.ತಾಯಿಯಿಂದ ನಿರೀಕ್ಷೆಗಿಂತ ಹೆಚ್ಚು ಸಹಕಾರಗಳು ದೊರೆಯುತ್ತವೆ. ಸಂಗಾತಿಯಿಂದ ಆರ್ಥಿಕ ಸಹಾಯಗಳು ಸರಿಯಾದ ಸಮಯದಲ್ಲಿ ದೊರೆಯಬಹುದು.ಧರ್ಮವಿದ್ಯೆಯನ್ನು ಹೇಳಿಕೊಡುವವರಿಗೆ ಮತ್ತು ಅನುಸರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚಾಗುತ್ತದೆ. ಉದ್ಯೋಗಸ್ಥಳದಲ್ಲಿ ಸಾಕಷ್ಟು ಪ್ರತಿರೋಧ ಎದುರಾಗಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಇದ್ದ ಕಾನೂನಿನ ತಕರಾರುಗಳು ಪರಿಹಾರವಾಗುತ್ತದೆ. ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3
ಮೀನ
ಆತ್ಮ ಗೌರವವು ಅತಿಯಾಗಿರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯ ಮಟ್ಟಕ್ಕಿರುತ್ತದೆ. ನಿಮ್ಮ ಬಂಧುಗಳೇ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಮಾಡು ವವರು. ಕೃಷಿಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ನಿಮ್ಮ ಸಂಗಾತಿಯಿಂದ ನಿರೀಕ್ಷಿತ ಸಹಕಾರಗಳು ದೊರೆಯು ವುದು ಕಡಿಮೆ. ಸೌಂದರ್ಯ ಸಾಮಗ್ರಿಗಳಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ.ಸರ್ಕಾರಿ ಗುತ್ತಿಗೆಗಳಲ್ಲಿ ಹೆಚ್ಚು ಆದಾಯ ಬರುತ್ತದೆ.ಜಾನಪದ ಕಲೆಗಾರರಿಗೆ ಬೇಡಿಕೆ ಬರುತ್ತದೆ. ಇವರು ಜಾನಪದಕಲೆಯನ್ನು ಕಲಿಸಿಕೊಡ ಬಹುದು. ತಂದೆಯ ಬಳಿ ಕಾವೇರಿದಮಾತುಗಳು ಆಗ ಬಹುದು.ಉದ್ಯೋಗದಲ್ಲಿ ಆದಾಯ ಹೆಚ್ಚಳವಾಗುವ ಸಾಧ್ಯತೆ ಇದೆ. ಸಿದ್ಧಉಡುಪುಗಳನ್ನು ತಯಾರಿಸುವವ ರಿಗೆ ಹೆಚ್ಚಿನ ಬೇಡಿಕೆಬರುತ್ತದೆ. ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ