ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಈ ರಾಶಿಯ ಕೃಷಿಕರಿಗೆ ಹೆಚ್ಚು ವರಮಾನ ಇರಲಿದೆ
Published 24 ಫೆಬ್ರುವರಿ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1) ಎಲ್ಲವೂ ನನಗೆ ಗೊತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಇರುತ್ತದೆ, ಆದರೆ ಬೇರೆಯವರು ಮಾತನಾಡಿ ದಾಗ ಸಾಕಷ್ಟು ತಿಳಿದಿಲ್ಲವೆಂದು ನಿಮಗೆ ಅರ್ಥವಾಗು ತ್ತದೆ. ಹಣದ ಒಳಹರಿವು ಮಧ್ಯಮ ಗತಿಯಲ್ಲಿರುತ್ತದೆ. ನಟರಿಗೆ ಹೆಚ್ಚು ಅವಕಾಶಗಳು ದೊರೆತು ಸಂಪಾದನೆ ಆಗುತ್ತದೆ. ಬಂಧುಗಳ ವೈರವಿದ್ದರೂ ಸಹಕೆಲವೊಂದು ಕಾರ್ಯಗಳಿಗೆ ಮುನ್ನುಡಿ ಬರೆಯುವಿರಿ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ಲಾಭವಿರುತ್ತದೆ. ಅಡುಗೆ ಎಣ್ಣೆಯನ್ನು ತಯಾರಿಸಿ ಮಾರುವವರಿಗೆ ಲಾಭ ಹೆಚ್ಚುತ್ತದೆ. ಭೂಮಿಯನ್ನು ಅಭಿವೃದ್ಧಿ ಪಡಿಸುವವರಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಯಂತೆ ಫಲಿತಾಂಶವಿರುತ್ತದೆ. ಆಯುರ್ವೇದ ವೈದ್ಯರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಸಂಗಾತಿ ಮಾಡಿದ ವ್ಯಾಪಾರದಿಂದ ಲಾಭ ಹೆಚ್ಚಾಗುತ್ತದೆ. ತಾಯಿಯ ನಿಷ್ಠೂರಕ್ಕೆ ಒಳಗಾಗುವಿರಿ. ಹಿರಿಯರ ಆಸ್ತಿಯನ್ನು ತೆಗೆದುಕೊಂಡ ಬಗ್ಗೆ ವಿವಾದಗಳು ಏಳಬಹುದು.
ವೃಷಭ
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2) ಹಿರಿಯರ ಜೊತೆ ಕೃಷಿ ಚಟುವಟಿಕೆ ನಡೆಸಲು ಜೊತೆಯಾಗುವಿರಿ. ಧನದಾಯವುಮಧ್ಯಮಗತಿಯಲ್ಲಿ ಇರುತ್ತದೆ. ಬಹಳವ್ಯವಹಾರಿಕವಾಗಿ ಮಾತನಾಡಿನಿಮ್ಮ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಪಶು ಸಂಗೋಪನೆ ಮಾಡುವವರಿಗೆ ಹೆಚ್ಚುಆದಾಯ ವಿರುತ್ತದೆ.ವಿದ್ಯಾರ್ಥಿ ಗಳಿಗೆ ಈಗ ಕಡಿಮೆ ಪ್ರಮಾಣದ ಯಶಸ್ಸು ಇರುತ್ತದೆ. ಹಿರಿಯರ ಆರೋಗ್ಯದ ಬಗ್ಗೆಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಗೆ ಹಿರಿಯರಿಂದ ಆಸ್ತಿ ಬರಬಹುದು. ಹೊಸ ಆಸ್ತಿಯನ್ನು ಕೊಳ್ಳಲು ಸಂಗಾತಿಯು ಸಹಕರಿಸುವರು. ಮನೆಯ ಪಾಠ ಮಾಡುವವರಿಗೆ ವಿದ್ಯಾರ್ಥಿಗಳಿಂದ ಅನಿರೀಕ್ಷಿತ ಗೌರವ ಸಮರ್ಪಣೆ ಇರುತ್ತದೆ. ಆಭರಣ ತಯಾರಕರಿಗೆ ಸ್ವಲ್ಪ ಹಿನ್ನಡೆಯಾಗುವ ಸಂದರ್ಭವಿದೆ. ಹಿರಿಯರ ಸಹಾಯದಿಂದ ಸರ್ಕಾರಿ ಗುತ್ತಿಗೆಗಳು ಅಥವಾ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ.
ಮಿಥುನ
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) ಹಿರಿಯರನ್ನು ಓಲೈಸುವುದರಲ್ಲಿ ಯಶಸ್ವಿ ಆಗುವಿರಿ ಹಾಗೂ ಅವರಿಂದ ನಿಮಗೆ ಬೇಕಾದ ಅನು ಕೂಲತೆಗಳನ್ನು ಪಡೆದುಕೊಳ್ಳಲು ಪ್ರಯತ್ನಪಡುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ತಾಯಿಯ ಮತ್ತು ಸೋದರಿಯರ ಸಹಕಾರಗಳು ನಿಮಗೆ ದೊರೆಯುತ್ತವೆ. ಆಸ್ತಿ ಮಾಡುವ ವಿಚಾರದಲ್ಲಿ ಹೆಚ್ಚು ಆತುರತೆ ಬೇಡ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ.ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯೊಡನೆ ಕೂಡಿಮಾಡಿ ರುವ ಹಣಕಾಸಿನ ವ್ಯವಹಾರಗಳಲ್ಲಿ ಲಾಭವಿರುತ್ತದೆ.. ಆಗಬೇಕೆಂದಿದ್ದ ಸರ್ಕಾರಿ ದಾಖಲೆಗಳು ಯಾರದೋ ವಶೀಲಿಯಿಂದ ನಿಲ್ಲುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಕೆಲಸದ ಒತ್ತಡಗಳು ಹೆಚ್ಚಾಗುವ ಸಾಧ್ಯತೆಗಳಿವೆ. ವಿದೇಶದಲ್ಲಿ ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ.
ಕರ್ಕಾಟಕ
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ) ಆಲಸೀತನ ಇದ್ದರು ಸಹ ಬಲವಂತದಿಂದ ಕೆಲಸ ಕಾರ್ಯ ಆರಂಭಿಸುವಿರಿ. ಧನದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಸಂಗೀತಗಾರರಿಗೆ ಹೆಚ್ಚು ಮನ್ನಣೆ ದೊರೆಯುತ್ತದೆ. ಬಂಧುಗಳಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು. ಸಂಗಾತಿಯ ಸಹಕಾರದಿಂದ ಆಸ್ತಿಮಾಡಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಗಳಿವೆ. ನಿಮ್ಮ ಸಂಸಾರದಲ್ಲಿ ಕಠಿಣಮಾತುಗಳು ಬರಬಹುದು.ಪಾಲು ದಾರಿಕೆಯ ವ್ಯವಹಾರಗಳಲ್ಲಿ ನಿಮ್ಮ ಕೆಲವು ನಿರ್ಧಾರ ಗಳು ನಿಮ್ಮ ಆದಾಯವನ್ನು ಕಡಿಮೆ ಮಾಡ ಬಹುದು. ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರವನ್ನು ಮಾಡುವವರಿಗೆ ಹೆಚ್ಚು ಆದ್ಯತೆ ದೊರೆಯುತ್ತದೆ. ವೃತ್ತಿ ಯಲ್ಲಿ ಇದ್ದ ಗೊಂದಲಗಳು ದೂರವಾಗಿ ವೇತನ ಏರಿಕೆ ಸಹ ಆಗುತ್ತದೆ. ಹಾಲಿನ ಉತ್ಪನ್ನಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಲಾಭವಿರುತ್ತದೆ.
ಸಿಂಹ
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) ಮನಸ್ಸಿನಲ್ಲಿ ಬಹಳ ಆನಂದವಿರುತ್ತದೆ. ಮಾತನಾಡುವಾಗ ಹೆಚ್ಚು ಧರ್ಮ ಸೂಕ್ಷ್ಮಗಳ ಬಗ್ಗೆ ಗಮನವಿರಲಿ. ಧನಾದಾಯವು ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳ ಚಟುವಟಿಕೆಗಳು ನಿಧಾನ ಗತಿಯಲ್ಲಿರುತ್ತವೆ ಹಾಗೂ ಬಂಧುಗಳ ನಡುವೆ ಕಾವೇರಿದ ಮಾತುಗಳಾಗಬಹುದು. ಆಸ್ತಿಕೊಳ್ಳಲು ಒಟ್ಟು ಮಾಡಿದ್ದ ಹಣ ನಿಮಗೆ ಉಪಯೋಗಕ್ಕೆ ಬರುತ್ತದೆ. ಮಕ್ಕಳಿಗೆ ಅಧ್ಯಯನದಲ್ಲಿ ಉತ್ತಮ ರೀತಿಯಲ್ಲಿ ಫಲಿತಾಂಶ ಬರುತ್ತದೆ. ನಿಮ್ಮ ಹೆಚ್ಚು ಬಂಡವಾಳವನ್ನು ಆಸ್ತಿ ಮೇಲೆ ಹೂಡಲು ಪ್ರಯತ್ನ ಪಡುವಿರಿ. ಸಂಗಾತಿ ಯಿಂದ ನಿರೀಕ್ಷಿತ ಸಹಾಯಗಳು ಕಡಿಮೆಯಾಗಿ ನಿಮ್ಮ ಮೇಲೆ ಕೋಪಗೊಳ್ಳುವರು.ವಾಹನಚಲಾವಣೆಯನ್ನು ಮಾಡುವಾಗ ಸಾಕಷ್ಟು ಎಚ್ಚರವಹಿಸಿರಿ, ಅಪಘಾತ ಗಳಾಗುವ ಲಕ್ಷಣಗಳಿವೆ. ನಿಮ್ಮ ಹಿರಿಯರ ಆಸ್ತಿಗಳು ನಿಮ್ಮ ಕೈ ಸೇರಬಹುದು, ಅವರು ಕೂಡಿಟ್ಟಹಣಗಳು ಈಗ ನಿಮಗೆ ಬರುತ್ತವೆ.
ಕನ್ಯಾ
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2) ಧರ್ಮ ಗುರುಗಳ ಹತ್ರ ಹೋಗಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಿಕೊಳ್ಳುವಿರಿ. ಆದಾಯ ವಿದ್ದರೂ ಸಹ ಅದು ನಿಮ್ಮನ್ನು ತಲುಪಲು ನಿಧಾನ ವಾಗಬಹುದು. ನಿಮ್ಮ ನಡವಳಿಕೆಯಿಂದ ಜನರನ್ನು ಸಂಪಾದನೆ ಮಾಡಿಕೊಳ್ಳುವಿರಿ. ಸಂಸಾರದಲ್ಲಿ ಸ್ವಲ್ಪ ಕಸಿವಿಸಿಗಳು ಇರುತ್ತವೆ. ವಿದ್ಯಾರ್ಥಿಗಳಿಗೆ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಫಲಿತಾಂಶ ವಿರುತ್ತದೆ. ಉಸಿರಾಟದ ತೊಂದರೆ ಕೆಲವರನ್ನು ಕಾಡಬಹುದು. ವಿದೇಶದಲ್ಲಿರುವ ನಿಮ್ಮ ಬಂಧುಗಳನ್ನು ಹೋಗಿ ಸೇರಿಕೊಳ್ಳಬಹುದು. ನಿಮ್ಮ ಉದ್ಯೋಗದ ಸ್ಥಳದಲ್ಲಿ ಹಿತಶತ್ರುಗಳು ಹೆಚ್ಚಾಗುವರು. ಸ್ವಯಂ ಉದ್ಯೋಗಮಾಡುವವರಿಗೆ ಹೆಚ್ಚುವ್ಯವಹಾರ ನಡೆಯುವ ಸಂದರ್ಭವಿದೆ. ಸರ್ಕಾರಿಮಟ್ಟದ ಕೆಲವು ಕೆಲಸಗಳು ನಿಧಾನವಾಗಬಹುದು.ಉಪಾಧ್ಯಾಯರಿಗೆ ಸ್ವಲ್ಪ ಹಿನ್ನಡೆಯಾಗುವ ಸಂದರ್ಭವಿದೆ.
ತುಲಾ
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3) ಅತಿಯಾದ ಆತ್ಮಭಿಮಾನ ನಿಮ್ಮಲ್ಲಿ ಇರುತ್ತದೆ. ಮಾತನಾಡುವಾಗ ಎಚ್ಚರ ತಪ್ಪಿ ಆಡುವ ಮಾತು ನಿಮ್ಮನ್ನು ಘಾಸಿಗೊಳಿಸುತ್ತದೆ. ಧನಾದಾಯವು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ನಿಮ್ಮ ನಡವಳಿಕೆಗ ಳಿಂದ ಹಿರಿಯ ಬಂಧುಗಳನ್ನು ದೂರ ಮಾಡಿಕೊಳ್ಳುವಿರಿ. ಕೃಷಿಯಿಂದ ಆದಾಯ ಇರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರುವವರಿಗೂ ಸಹ ಆದಾಯ ಹೆಚ್ಚುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಕೀಲುನೋವು ಅಥವಾ ಚರ್ಮರೋಗಗಳು ನಿಮ್ಮನ್ನು ಬಾಧಿಸಬಹುದು. ಸಂಗಾತಿ ಕಡೆಯಿಂದ ಧನಸಹಾಯ ದೊರೆಯುವ ಸಾಧ್ಯತೆಗಳಿವೆ. ಹಿರಿಯರಿಂದ ನಿಮ್ಮ ಕೆಲಸಕಾರ್ಯಗಳಿಗೆ ಅಡ್ಡಿಬರಬಹುದು. ಹಿರಿಯರಿಂದ ಮಾಡಿದ ಸಾಲಗಳನ್ನು ತೀರಿಸಲೇಬೇಕಾದ ಸಂದರ್ಭ ಬರಬಹುದು. ವೃತ್ತಿಯಲ್ಲಿ ಏರಿಕೆಯಾಗಬೇಕಾಗಿದ್ದ ವೇತನ ಸದ್ಯಕ್ಕೆ ನಿಲ್ಲುತ್ತದೆ. ಸರ್ಕಾರಿ ಅನುದಾನಗಳು ಸಿಗುತ್ತವೆ.
ವೃಶ್ಚಿಕ
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ) ಕೃಷಿಕರಿಗೆ ಹೆಚ್ಚು ವರಮಾನ ವಿರುತ್ತದೆ. ಮಾತಿನಲ್ಲಿ ವ್ಯತ್ಯಾಸವಾದರೂ ಸಹ ಅದು ಅಲ್ಲಿಗೆ ನಿಲ್ಲುತ್ತದೆ. ನಿಮ್ಮ ನಡವಳಿಕೆಗಳಿಂದ ಬಂಧುಗಳ ಜೊತೆ ವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರಯತ್ನಪಡುವಿರಿ. ಬಂಧುಗಳನ್ನು ವಿಶ್ವಾಸಕ್ಕೆತೆಗೆದುಕೊಳ್ಳಲು ಯತ್ನಮಾ ಡುವಿರಿ. ಕೃಷಿ ಭೂಮಿಯನ್ನು ಖರೀದಿ ಮಾಡುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ಇರುತ್ತದೆ. ನವೀನ ಕೃಷಿಯನ್ನು ಮಾಡುವವರಿಗೆ ಅಗತ್ಯ ಸಹಕಾರಗಳು ದೊರೆಯುತ್ತವೆ. ಕೆಲವು ಹಿರಿಯರ ಶಾಪಗಳು ನಿಮ್ಮನ್ನು ಕಾಡಬಹುದು. ಸಂಗಾತಿಯು ಕೃಷಿ ಮಾಡಲು ನಿಮಗೆ ಧನ ಸಹಕಾರ ನೀಡುವರು. ವ್ಯವಹಾರ ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಸ್ವಲ್ಪ ಕಡಿಮೆಯಾಗಬಹುದು. ಉದ್ದಿಮೆದಾರರಿಗೆ ಅವರ ಕಾರ್ಖಾನೆಗಳಲ್ಲಿ ಉತ್ಪಾದನೆ ಗುರಿಯ ಹತ್ತಿರಕ್ಕೆ ಬರುತ್ತದೆ.
ಧನು
ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 ) ನಿಶ್ಚಿತ ಗುರಿಯೊಂದಿಗೆ ಕೆಲಸ ಆರಂಭಿಸುವಿರಿ. ಧನಾದಾಯವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ರಾಜಕಾರಣಿಗಳು ಅವರವೈರಿಗಳನ್ನು ಬೆದರಿಸಿ ಸುಮ್ಮ ನಾಗಿಸುವರು. ನಿಮ್ಮ ವೈರಿಗಳು ನಿಮ್ಮ ಸಹಕಾರವನ್ನು ಬಯಸಿ ಬರುವರು. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವಿದೇಶಗಳಿಗೆ ಧಾನ್ಯವನ್ನು ರಫ್ತು ಮಾಡುತ್ತಿದ್ದವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ. ವಿದೇಶದಲ್ಲಿರುವವರು ಸ್ವದೇಶದಲ್ಲಿ ಆಸ್ತಿ ಮಾಡಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನಅಭಿವೃದ್ಧಿ ಇರುತ್ತದೆ. ಹಳೆಯ ಸಾಲಗಳನ್ನು ಈಗ ವಸೂಲಿ ಮಾಡಬಹುದು. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಿಗೆ ಸಂಗಾತಿಯ ಸಹಕಾರವಿರುತ್ತದೆ. ತಾಯಿಯು ನಿಮ್ಮೊಡನೆ ಮುನಿಸಿಕೊಳ್ಳಬಹುದು.ತಂದೆ ಯಿಂದ ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಹೆಚ್ಚು ಗೌರವ ದೊರೆಯುತ್ತದೆ. ಅಲಂಕಾರಿಕ ವಸ್ತುಗ ಳನ್ನು ತಯಾರಿಸುವವರಿಗೆ ಹೆಚ್ಚಿನ ತಯಾರಿಕಾ ಆದೇಶ ಗಳು ದೊರೆಯುತ್ತವೆ.
ಮಕರ
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) ದೇಹ ಸೌಂದರ್ಯದ ಕಡೆಗೆ ಮತ್ತು ದೇಹಧಾಢ್ಯತೆಯ ಕಡೆಗೆ ಗಮನ ಹರಿಸುವಿರಿ. ನಿಮ್ಮ ಆದಾಯವು ಸ್ವಲ್ಪ ಚೇತರಿಕೆಯತ್ತ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ನಿಧಾನವಾದರೂ ಆಗುತ್ತವೆ. ಬುದ್ಧಿವಂತಿಕೆಯಿಂದ ವ್ಯವಹಾರ ಮಾಡಿ ಹಣಮಿಗಿಸು ವಿರಿ. ನಿಮ್ಮ ನಿಗೂಢ ನಡೆಗಳು ವೈರಿಗಳನ್ನು ಕಂಗೆಡಿ ಸುತ್ತದೆ. ಆಸ್ತಿ ಖರೀದಿಯ ವಿಚಾರದಲ್ಲಿ ಮುಂದುವರೆ ಯಬಹುದು. ವಿದ್ಯಾರ್ಥಿಗಳಿಗೆ ಸ್ವಲ್ಪಮಟ್ಟಿನ ಯಶಸ್ಸು ಇದ್ದೇ ಇರುತ್ತದೆ. ರಕ್ತದೊತ್ತಡ ಇರುವವರು ಉದ್ವೇಗಕ್ಕೆ ಒಳಗಾಗದಿರಿ. ಪ್ರೇಮಿಗಳ ಪ್ರೇಮವು ಹಿರಿಯರ ಕೋಪಕ್ಕೆ ಕಾರಣವಾಗಿ ನಂತರ ಒಪ್ಪಿಗೆ ಸಿಗಬಹುದು. ವೃತ್ತಿಯಲ್ಲಿ ಸ್ವಲ್ಪ ಅಭಿವೃದ್ಧಿಯನ್ನು ಕಾಣಬಹುದು. ನವೀನ ಕೃಷಿಗೆ ಹೆಚ್ಚು ಒತ್ತು ಕೊಡುವಿರಿ. ಕೃಷಿಯಿಂದ ಆದಾಯವನ್ನು ನಿರೀಕ್ಷೆ ಮಾಡಬಹುದು. ಸರ್ಕಾರಿ ಗುತ್ತಿಗೆಗಳ ಹಣ ಬರುವುದು ನಿಧಾನವಾಗಬಹುದು.
ಕುಂಭ
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3) ಯುವಕರಿಗೆ ವ್ಯವಹಾರಿಕತೆಯು ಸಾಕಷ್ಟು ಮೈಗೂಡಿರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಆದಾಯ ವಿರುತ್ತದೆ. ಕೃಷಿಗೆ ಬೇಕಾದ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಲಾಭವಿರುತ್ತದೆ. ಧನಾದಾಯವು ಕಡಿಮೆ ಇರುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ಹೆಚ್ಚು ಆದಾಯ ಇರುತ್ತದೆ. ಹಿರಿಯರಿಗೆ ಸಾರ್ವಜನಿಕವಾಗಿ ಹೆಚ್ಚು ಗೌರವ ದೊರೆಯುತ್ತದೆ. ಸ್ಥಿರಾಸ್ತಿ ಖರೀದಿ ವಿಚಾರದಲ್ಲಿ ಹೆಚ್ಚು ಮುಂದುವರೆಯುವುದು ಬೇಡ, ನಷ್ಟವಾಗುವ ಸಾಧ್ಯತೆ ಇದೆ. ಗಣಿತಜ್ಞರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ವ್ಯತ್ಯಾಸವಾಗಿದ್ದ ಹಿರಿಯರ ಆರೋಗ್ಯಗಳು ಸುಧಾರಿಸುತ್ತದೆ. ಪ್ರೀತಿ ಪ್ರೇಮಗಳ ಹಿಂದೆ ಬಿದ್ದವರಿಗೆ ನಿರಾಸೆ ಆಗಬಹುದು. ಪಾರಂಪರಿಕ ವಸ್ತುಗಳ ಹುಡುಕಾಟ ಮಾಡುವವರಿಗೆ ಯಶಸ್ಸು ಇರುವುದಿಲ್ಲ. ತಂದೆಯ ಕೃಷಿ ಜಮೀನುಗಳು ಈಗ ದೊರೆಯುವ ಸಾಧ್ಯತೆಗಳಿವೆ.
ಮೀನ
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ) ವಿದೇಶಿ ವಸ್ತುಗಳ ವ್ಯಾಮೋಹ ಅತಿಯಾಗಿ ಇರುತ್ತದೆ. ನೀವು ನಗುನಗುತ್ತಾ ಮಾತನಾಡಿದರು ಅದರ ಹಿಂದಿನ ಕೊಂಕು ಜನರಿಗೆ ತಿಳಿಯುತ್ತದೆ. ಧನ ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸಾಂಪ್ರದಾ ಯಕ ಕೃಷಿಯನ್ನು ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಬಂಧುಗಳ ಕಡೆಯಿಂದ ಸಾಕಷ್ಟು ನಿಷ್ಟುರ ವನ್ನು ಕಟ್ಟಿಕೊಳ್ಳುವಿರಿ. ಮನೆಯಲ್ಲಿ ಹಿರಿಯರ ಮಾತಿ ನಿಂದ ಅಶಾಂತಿ ಉಂಟಾಗಬಹುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಶೀತಬಾಧೆ ಇರುವ ವರು ಹೆಚ್ಚುಎಚ್ಚರ ವಹಿಸಬೇಕು. ಸಂಗಾತಿಯು ನಿಮ್ಮ ಬೇಡಿಕೆಗಳನ್ನು ಪುರಸ್ಕರಿಸದಿರಬಹುದು.ಮಹಿಳೆಯರ ವಸ್ತ್ರಗಳನ್ನು ಸಿದ್ಧಪಡಿಸುವವರಿಗೆ ಅನಿರೀಕ್ಷಿತ ತಯಾ ರಿಕಾ ಆದೇಶಗಳು ದೊರೆತು ಸೂಕ್ತ ಆದಾಯ ಹೆಚ್ಚು ತ್ತದೆ. ತವರು ಮನೆಯಿಂದ ನಿರೀಕ್ಷಿತ ಸಹಾಯವಿಲ್ಲ ದಿದ್ದರೂ ಸ್ವಲ್ಪ ಸಹಾಯ ಸಿಗುತ್ತದೆ. ಸಹೋದ್ಯೋಗಿ ಗಳ ನಡುವೆ ಕಾವೇರಿದ ಮಾತುಗಳಾಗಬಹುದು.