<p><strong>ನವದೆಹಲಿ (ಪಿಟಿಐ): </strong>ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸಿರುವುದು ದೃಢಪಟ್ಟರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತ ಮಾಡಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.<br /> <br /> ಇಂತಹ ಚಂದಾದಾರರ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಎರಡು ವರ್ಷಗಳ ಕಾಲ ಇವರಿಗೆ ಎಲ್ಲ ರೀತಿಯ ದೂರವಾಣಿ ಸೇವಾ ಸೌಲಭ್ಯ ನಿರ್ಬಂಧಿಸಲಾಗುವುದು ಎಂದೂ `ಟ್ರಾಯ್' ಪ್ರಕಟಣೆ ತಿಳಿಸಿದೆ.<br /> <br /> ದೂರವಾಣಿ ವಾಣಿಜ್ಯ ಸಂವಹನ ಗ್ರಾಹಕ ಆದ್ಯತಾ ನಿಯಮ ತಿದ್ದುಪಡಿ ಅನ್ವಯ ದೂರವಾಣಿ ಸೇವಾ ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ. ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸುವ ಚಂದಾದಾರರ ವಿರುದ್ಧ ಸೂಕ್ತ ದೂರು ದಾಖಲಾದರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತಗೊಳಿಸಿ, ತನಿಖೆ ನಡೆಸುವಂತೆ ಸೂಚಿಸಲಾಗಿದೆ.<br /> <br /> ಕೆಲವು ಟೆಲಿಮಾರುಕಟ್ಟೆ ಕಂಪೆನಿಗಳು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಅನಪೇಕ್ಷಿತ ಕರೆ, ಸಂದೇಶ ಕಳುಹಿಸುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು `ಟ್ರಾಯ್' ಸದಸ್ಯ ಆರ್.ಕೆ ಅರ್ನಾಲ್ಡ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. <br /> <br /> ವ್ಯವಹಾರ ಉದ್ದೇಶದ `ಎಸ್ಎಂಎಸ್'ಗಳಿಗೆ ಜೂನ್ 1ರಿಂದ 5 ಪೈಸೆ ಶುಲ್ಕ ಅನ್ವಯವಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಮೊಬೈಲ್ ಚಂದಾದಾರರು ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸಿರುವುದು ದೃಢಪಟ್ಟರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತ ಮಾಡಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ.<br /> <br /> ಇಂತಹ ಚಂದಾದಾರರ ದೂರವಾಣಿ ಸಂಖ್ಯೆ ಮತ್ತು ಹೆಸರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಎರಡು ವರ್ಷಗಳ ಕಾಲ ಇವರಿಗೆ ಎಲ್ಲ ರೀತಿಯ ದೂರವಾಣಿ ಸೇವಾ ಸೌಲಭ್ಯ ನಿರ್ಬಂಧಿಸಲಾಗುವುದು ಎಂದೂ `ಟ್ರಾಯ್' ಪ್ರಕಟಣೆ ತಿಳಿಸಿದೆ.<br /> <br /> ದೂರವಾಣಿ ವಾಣಿಜ್ಯ ಸಂವಹನ ಗ್ರಾಹಕ ಆದ್ಯತಾ ನಿಯಮ ತಿದ್ದುಪಡಿ ಅನ್ವಯ ದೂರವಾಣಿ ಸೇವಾ ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ. ಅನಪೇಕ್ಷಿತ ಕರೆ ಅಥವಾ ಸಂದೇಶ ಕಳುಹಿಸುವ ಚಂದಾದಾರರ ವಿರುದ್ಧ ಸೂಕ್ತ ದೂರು ದಾಖಲಾದರೆ ತಕ್ಷಣವೇ ಅವರ ದೂರವಾಣಿ ಸಂಪರ್ಕ ಕಡಿತಗೊಳಿಸಿ, ತನಿಖೆ ನಡೆಸುವಂತೆ ಸೂಚಿಸಲಾಗಿದೆ.<br /> <br /> ಕೆಲವು ಟೆಲಿಮಾರುಕಟ್ಟೆ ಕಂಪೆನಿಗಳು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಂಡು ಅನಪೇಕ್ಷಿತ ಕರೆ, ಸಂದೇಶ ಕಳುಹಿಸುತ್ತಿರುವುದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ ಎಂದು `ಟ್ರಾಯ್' ಸದಸ್ಯ ಆರ್.ಕೆ ಅರ್ನಾಲ್ಡ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. <br /> <br /> ವ್ಯವಹಾರ ಉದ್ದೇಶದ `ಎಸ್ಎಂಎಸ್'ಗಳಿಗೆ ಜೂನ್ 1ರಿಂದ 5 ಪೈಸೆ ಶುಲ್ಕ ಅನ್ವಯವಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>