‘ಎರಡು ತಲೆಮಾರುಗಳ ಹಿಂದೆ ನಮ್ಮೂರಿನ ನದಿ ದಡದಲ್ಲಿ ರಾಮ ಮಂದಿರ ಇತ್ತು. ಪ್ರವಾಹದ ವೇಳೆ ಮುಳುಗಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ರಾಮನ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವಕರು ಸೋಮವಾರ ಇಡೀ ದಿನ ಜೆಸಿಬಿ ಸಾಧನದ ನೆರವಿನಿಂದ ದೇವಸ್ಥಾನಕ್ಕೆ ಶೋಧ ನಡೆಸಿದರು. ಸಂಜೆ ಪತ್ತೆಯಾಯಿತು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.