<p><strong>ನವದೆಹಲಿ</strong>: ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ದಕ್ಷಿಣದ ರಾಜ್ಯಗಳ ಸಂಸದರು ಗಲಾಟೆ ಮಾಡಿದ ಕಾರಣ, ರಾಜ್ಯಸಭೆಯ ಬೆಳಗಿನ ಕಲಾಪವನ್ನು 40 ನಿಮಿಷಗಳಷ್ಟು ಮುಂದೂಡಲಾಯಿತು.</p>.<p>ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಡಿಎಂಕೆ ಹಾಗೂ ಇತರ ಪಕ್ಷಗಳ ಸಂಸದರು ನಿಯಮ 267ರಡಿ ನೋಟಿಸ್ ನೀಡಿದ್ದರು.</p>.<p>ಪೀಠದಲ್ಲಿದ್ದ ಉಪಸಭಾಪತಿ, ಈ ನೋಟಿಸ್ಗಳನ್ನು ತಿರಸ್ಕರಿಸಿದಾಗ, ವಿಪಕ್ಷಗಳ ಸಂಸದರು ಗಲಾಟೆ ಶುರು ಮಾಡಿದರಲ್ಲದೇ, ಪೀಠದ ಮುಂದೆ ಬಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಕಪ್ಪು ಅಂಗಿಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಡಿಎಂಕೆ ಸದಸ್ಯರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.</p>.<p>‘ಈ ವಿಚಾರ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಹೀಗಾಗಿ, ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಬೇಕು’ ಎಂಬ ಹರಿವಂಶ್ ಸಿಂಗ್ ಅವರ ಮನವಿಗೆ ಪ್ರತಿಭಟನೆ ನಿರತ ಸಂಸದರು ಕಿವಿಗೊಡಲಿಲ್ಲ. ಆಗ, ಹರಿವಂಶ್ ಸಿಂಗ್ ಅವರು ಕಲಾಪವನ್ನು ಮಧ್ಯಾಹ್ನ 12ರ ವರೆಗೆ ಮುಂದೂಡಿದರು.</p>.<p>ಡಿಎಂಕೆಯ ಆರ್.ಗಿರಿರಾಜನ್, ಎಂಡಿಎಂಕೆ ಪಕ್ಷದ ವೈಕೊ, ಸಿಪಿಐನ ಸಂತೋಷ್ ಕುಮಾರ್ ಪಿ. ಮಾತನಾಡಿದರು.</p>.<p>ತಮಿಳು ಭಾಷಿಕರ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ದೂರಿ, ಡಿಎಂಕೆ, ಎಂಡಿಎಂಕೆ ಸಂಸದರು, ನಂತರ ಸಂಸತ್ ಭವನದ ಹೊರಗೆ ಪ್ರತಿಭಟಿಸಿದರು. </p>.<p><strong>‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಜೆ.ಪಿ.ನಡ್ಡಾ</strong></p><p>‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್ನ (ಎನ್ಎಚ್ಎಂ) ‘ಕಾರ್ಯಕ್ರಮ ಸಂಚಾಲಕ ಗುಂಪು’ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಇದನ್ನು ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.</p><p>‘ಆಶಾ ಕಾರ್ಯಕರ್ತ’ರ ಗೌರವ ಧನ ಹೆಚ್ಚಿಸಬೇಕು ಎಂದು ರಾಜ್ಯ ಗಳು ಬೇಡಿಕೆ ಮುಂದಿಟ್ಟಿರುವ ಮಧ್ಯೆಯೇ, ಕೇಂದ್ರ ಈ ಮಾತು ಹೇಳಿದೆ.</p>.<p><strong>‘ಡೀಪ್ಸೀಕ್’ ನಿಷೇಧಕ್ಕೆ ‘ಕೈ’ ಒತ್ತಾಯ</strong></p><p>‘ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ, ಚೀನಾದ ಕೃತಕ ಬುದ್ಧಿಮತ್ತೆ(ಎ.ಐ) ಆ್ಯಪ್ ‘ಡೀಪ್ ಸೀಕ್’ಅನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಗೋವಾಲ್ ಕೆ.ಪಡವಿ ಲೋಕಸಭೆಯಲ್ಲಿ ಮಂಗಳವಾರ ಒತ್ತಾಯಿಸಿದರು.</p><p>ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅರುಣಾಚಲ ಪ್ರದೇಶವು ಭಾರತದ ಭಾಗವೇ ಎಂಬ ಪ್ರಶ್ನೆಗೆ ‘ಡೀಪ್ಸೀಕ್’ ಉತ್ತರ ನೀಡಿಲ್ಲ. ಹೀಗಾಗಿ ಈ ಆ್ಯಪ್ ಅನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.</p><p>ಈ ವಿಚಾರವಾಗಿ ಚೀನಾಕ್ಕೆ ನೋಟಿಸ್ ಜಾರಿ ಮಾಡುವಂತೆಯೂ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ದಕ್ಷಿಣದ ರಾಜ್ಯಗಳ ಸಂಸದರು ಗಲಾಟೆ ಮಾಡಿದ ಕಾರಣ, ರಾಜ್ಯಸಭೆಯ ಬೆಳಗಿನ ಕಲಾಪವನ್ನು 40 ನಿಮಿಷಗಳಷ್ಟು ಮುಂದೂಡಲಾಯಿತು.</p>.<p>ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಡಿಎಂಕೆ ಹಾಗೂ ಇತರ ಪಕ್ಷಗಳ ಸಂಸದರು ನಿಯಮ 267ರಡಿ ನೋಟಿಸ್ ನೀಡಿದ್ದರು.</p>.<p>ಪೀಠದಲ್ಲಿದ್ದ ಉಪಸಭಾಪತಿ, ಈ ನೋಟಿಸ್ಗಳನ್ನು ತಿರಸ್ಕರಿಸಿದಾಗ, ವಿಪಕ್ಷಗಳ ಸಂಸದರು ಗಲಾಟೆ ಶುರು ಮಾಡಿದರಲ್ಲದೇ, ಪೀಠದ ಮುಂದೆ ಬಂದು ಘೋಷಣೆಗಳನ್ನು ಕೂಗಲು ಆರಂಭಿಸಿದರು. ಕಪ್ಪು ಅಂಗಿಗಳನ್ನು ಧರಿಸಿ ಸದನಕ್ಕೆ ಬಂದಿದ್ದ ಡಿಎಂಕೆ ಸದಸ್ಯರು, ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.</p>.<p>‘ಈ ವಿಚಾರ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಹೀಗಾಗಿ, ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಬೇಕು’ ಎಂಬ ಹರಿವಂಶ್ ಸಿಂಗ್ ಅವರ ಮನವಿಗೆ ಪ್ರತಿಭಟನೆ ನಿರತ ಸಂಸದರು ಕಿವಿಗೊಡಲಿಲ್ಲ. ಆಗ, ಹರಿವಂಶ್ ಸಿಂಗ್ ಅವರು ಕಲಾಪವನ್ನು ಮಧ್ಯಾಹ್ನ 12ರ ವರೆಗೆ ಮುಂದೂಡಿದರು.</p>.<p>ಡಿಎಂಕೆಯ ಆರ್.ಗಿರಿರಾಜನ್, ಎಂಡಿಎಂಕೆ ಪಕ್ಷದ ವೈಕೊ, ಸಿಪಿಐನ ಸಂತೋಷ್ ಕುಮಾರ್ ಪಿ. ಮಾತನಾಡಿದರು.</p>.<p>ತಮಿಳು ಭಾಷಿಕರ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ದೂರಿ, ಡಿಎಂಕೆ, ಎಂಡಿಎಂಕೆ ಸಂಸದರು, ನಂತರ ಸಂಸತ್ ಭವನದ ಹೊರಗೆ ಪ್ರತಿಭಟಿಸಿದರು. </p>.<p><strong>‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಜೆ.ಪಿ.ನಡ್ಡಾ</strong></p><p>‘ಆಶಾ’ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವುದಕ್ಕೆ ರಾಷ್ಟ್ರೀಯ ಆರೋಗ್ಯ ಮಿಷನ್ನ (ಎನ್ಎಚ್ಎಂ) ‘ಕಾರ್ಯಕ್ರಮ ಸಂಚಾಲಕ ಗುಂಪು’ ನಿರ್ಧಾರ ಕೈಗೊಂಡಿದ್ದು, ಸರ್ಕಾರ ಇದನ್ನು ಅನುಷ್ಠಾನಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ರಾಜ್ಯಸಭೆಗೆ ಮಂಗಳವಾರ ತಿಳಿಸಿದ್ದಾರೆ.</p><p>‘ಆಶಾ ಕಾರ್ಯಕರ್ತ’ರ ಗೌರವ ಧನ ಹೆಚ್ಚಿಸಬೇಕು ಎಂದು ರಾಜ್ಯ ಗಳು ಬೇಡಿಕೆ ಮುಂದಿಟ್ಟಿರುವ ಮಧ್ಯೆಯೇ, ಕೇಂದ್ರ ಈ ಮಾತು ಹೇಳಿದೆ.</p>.<p><strong>‘ಡೀಪ್ಸೀಕ್’ ನಿಷೇಧಕ್ಕೆ ‘ಕೈ’ ಒತ್ತಾಯ</strong></p><p>‘ರಾಷ್ಟ್ರೀಯ ಭಾವನೆಗಳಿಗೆ ಧಕ್ಕೆ ತಂದಿರುವ ಕಾರಣ, ಚೀನಾದ ಕೃತಕ ಬುದ್ಧಿಮತ್ತೆ(ಎ.ಐ) ಆ್ಯಪ್ ‘ಡೀಪ್ ಸೀಕ್’ಅನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಸಂಸದ ಗೋವಾಲ್ ಕೆ.ಪಡವಿ ಲೋಕಸಭೆಯಲ್ಲಿ ಮಂಗಳವಾರ ಒತ್ತಾಯಿಸಿದರು.</p><p>ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಅರುಣಾಚಲ ಪ್ರದೇಶವು ಭಾರತದ ಭಾಗವೇ ಎಂಬ ಪ್ರಶ್ನೆಗೆ ‘ಡೀಪ್ಸೀಕ್’ ಉತ್ತರ ನೀಡಿಲ್ಲ. ಹೀಗಾಗಿ ಈ ಆ್ಯಪ್ ಅನ್ನು ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.</p><p>ಈ ವಿಚಾರವಾಗಿ ಚೀನಾಕ್ಕೆ ನೋಟಿಸ್ ಜಾರಿ ಮಾಡುವಂತೆಯೂ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>