ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ಟಿ. ಅವರ ಮಾಲೀಕತ್ವದ ಕಂಪನಿ ಮತ್ತು ಕೊಚ್ಚಿ ಮೂಲದ ವಿವಾದಿತ ಗಣಿಗಾರಿಕೆ ಕಂಪನಿ ನಡುವಿನ ಅವ್ಯವಹಾರದ ಆರೋಪ ಕುರಿತು ‘ಗಂಭೀರ ವಂಚನೆ ಪ್ರಕರಣಗಳ ತನಿಖಾ ವಿಭಾಗ’ದಿಂದ (ಎಸ್ಎಫ್ಐಒ) ತನಿಖೆ ಆರಂಭಿಸಲಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಎಸ್ಎಫ್ಐಒ ತನಿಖೆಗೆ ಆದೇಶಿಸಿದೆ.