ನೋಟಿಸ್ಗೆ ಉತ್ತರಿಸಿದ್ದ ವಕೀಲ ವಿರಾಜ್ ಕದಮ್, ವಯೋವೃದ್ಧ ಅರ್ಜಿ ದಾರರು ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನೆಲೆಸಿರುವವರು, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿರುವುದನ್ನು ಅವರು ಬಹಳ ತಡವಾಗಿ ತಿಳಿದರು ಮತ್ತು ಕೋವಿಡ್ ಸಮಯದಲ್ಲಿ ಅವರಿಗೆ ಮನೆಯಿಂದ ಹೊರಬರಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ಗೆ ತಡವಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಬಳಿಕವೇ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ. ಈ ಮೊಕದ್ದಮೆಯ ಎದುರು ಪಕ್ಷದವರಿಗೆ ಪ್ರತಿಕ್ರಿಯೆ ನೀಡಲು 8 ವಾರಗಳ ಕಾಲಾವಕಾಶ ನೀಡಿದೆ.