ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಿರ್ಮಲ್ಚಾರ್ ಬಳಿ ಭಾರತದ ಗಡಿ ನುಸುಳಿ ಜಾನುವಾರು ಮೇಯಿಸಲು ಬಂದಿದ್ದ ಬಾಂಗ್ಲಾದೇಶದ ರೈತರ ಗುಂಪೊಂದು ಇಬ್ಬರು ಬಿಎಸ್ಎಫ್ ಯೋಧರ ಮೇಲೆ ಹಲ್ಲೆ ನಡೆಸಿ, ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಜಾನುವಾರು ಮೇಯಿಸಲು ಭಾರತಕ್ಕೆ ಬಂದಿದ್ದ ರೈತರ ಗುಂಪನ್ನು ಯೋಧರು ತಡೆದಿದ್ದಾರೆ. ಆಗ ನೂರಕ್ಕಿಂತಲೂ ಹೆಚ್ಚು ಮಂದಿ ಬಂದು ಯೋಧರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.