‘ಈ ಮೊದಲುಇಂಗ್ಲಿಷ್ ಭಾಷೆಯನ್ನು ಬೌದ್ಧಿಕ ಜ್ಞಾನದ ಮಾನದಂಡವಾಗಿ ಪರಿಗಣಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಅದು ಕೇವಲ ಸಂವಹನದ ಭಾಷಾ ಮಾಧ್ಯಮವಷ್ಟೇ.ಈ ಭಾಷೆಯ ತಡೆಗೋಡೆಯಿಂದ ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ವೈದ್ಯರು ಮತ್ತು ಎಂಜಿನಿಯರ್ ಆಗಲು ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಪರ್ಯಾಯ ಮಾಧ್ಯಮದ ಆಯ್ಕೆಗೆ ಅವಕಾಶವೇ ಇರಲಿಲ್ಲ. ಆದರೆ, ಹೊಸ ಶಿಕ್ಷಣ ನೀತಿಯಿಂದ ಈ ಕೊರತೆಯನ್ನು ನಾವು ನೀಗಿಸುತ್ತಿದ್ದೇವೆ’ ಎಂದು ಮೋದಿ ಹೇಳಿದರು.