ಸಂತಾಪ ಸೂಚಿಸುವ ವೇಳೆ ಪಟಾಕಿ: ರಾಹುಲ್ ಕಿಡಿ
ರಾಹುಲ್ ಗಾಂಧಿ ಅವರು ಭಾಷಣವನ್ನು ಕೊನೆಗೊಳಿಸುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲರೂ ಎದ್ದು ನಿಂತು ಮೃತ ರೈತರಿಗೆ ಸಂತಾಪ ಸೂಚಿದರು. ಈ ವೇಳೆ ಸಭೆಯ ಸಮೀಪದಲ್ಲೇ ಕೆಲವು ಅಪರಿಚಿತರು ಪಟಾಕಿಗಳನ್ನು ಸಿಡಿಸಿದರು. ಇದರಿಂದ ಕೋಪಗೊಂಡ ರಾಹುಲ್ ಗಾಂಧಿ, ಪಟಾಕಿ ಹೊಡೆದವರು ಈ ರಾಷ್ಟ್ರದ ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.