ಈ ಕುರಿತು ಪ್ರತಿಕ್ರಿಯಿಸಿರುವ ಎಎಪಿ ಶಾಸಕ ಸೌರಭ್ ಭಾರದ್ವಾಜ್, ‘ದಿಲೀಪ್ ಭಾನ್(ಕಾಶ್ಮೀರಿ ವಲಸಿಗ) ಹೆಸರಿನಲ್ಲಿ ಬಿಜೆಪಿಯು ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ, ದಿಲೀಪ್ ಭಾನ್ ಎನ್ನುವ ಹೆಸರೇ ನಕಲಿಯಾಗಿದೆ. ಅವರು ಅಸ್ತಿತ್ವದಲ್ಲೇ ಇಲ್ಲ. ಈ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಇದು ಬಿಜೆಪಿ ಮತ್ತು ಅದರ ನಾಯಕರ ನಿಜವಾದ ಮುಖ, ಅವರು ಸುಳ್ಳುಗಾರರು’ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.