ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ವಿಭಾಗೀಯ ಪೀಠವು, ’ಯಾವುದೇ ವ್ಯಕ್ತಿ ಅಥವಾ ಒಂದು ಗುಂಪು ನಡೆಸಿದ ಸಂಘಟಿತ ಕಿಡಿಗೇಡಿ ಕೃತ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊಕಾ ಕಾಯ್ದೆ ಹೇರಿಕೆಗೆ ಹಿಂಸಾಚಾರ ನಡೆದಿರಬೇಕೆಂಬ ಷರತ್ತು ಇಲ್ಲ. ಬೆದರಿಕೆ ಮತ್ತು ಬಲವಂತಪಡಿಸುವುದು ಸಹ ಸಂಘಟಿತ ಅಪರಾಧವೇ’ ಎಂದಿದೆ.