<p class="title"><strong>ಲಖನೌ: </strong>2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿ ಹೊಂದಿರುವ ಸಮಾಜವಾದಿ ಪಕ್ಷವು (ಎಸ್ಪಿ) ಅ. 12ರಿಂದ ‘ಸಮಾಜವಾದಿ ವಿಜಯ್ ಯಾತ್ರಾ’ ಆರಂಭಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಘೋಷಿಸಿದ್ದಾರೆ.</p>.<p class="title">‘ಬಿಜೆಪಿ ಸರ್ಕಾರದ ಭ್ರಷ್ಟ, ನಿರಂಕುಶ ಮತ್ತು ದಮನಕಾರಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ’ ಎಂದು ಎಸ್ಪಿ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.</p>.<p class="title"><strong>ಓದಿ:</strong><a href="https://www.prajavani.net/india-news/pm-narendra-modi-attacks-previous-sp-govt-in-up-says-it-created-hindrances-in-implementation-of-872850.html" itemprop="url">ವಸತಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದ ಎಸ್ಪಿ ಸರ್ಕಾರ: ಮೋದಿ ವಾಗ್ದಾಳಿ</a></p>.<p class="title">‘ರಾಜ್ಯದಲ್ಲಿನ ಅಮಾನವೀಯ ಸರ್ಕಾರವನ್ನು ಕಿತ್ತೊಗೆಯಲು ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್ ಅವರು ಅ. 12ರಿಂದ ಸಮಾಜವಾದಿ ವಿಜಯ್ ಯಾತ್ರೆಯನ್ನು ಕೈಗೊಳ್ಳುವರು. ಅಖಿಲೇಶ್ ಅವರು ಈ ಹಿಂದೆ ರಾಜ್ಯದಲ್ಲಿ ಬದಲಾವಣೆಗಾಗಿ 2001ರ ಜುಲೈ 31ರಂದು ‘ಕ್ರಾಂತಿ ಯಾತ್ರೆ’ ಹಾಗೂ 2011ರ ಸೆ. 12ರಂದು ‘ಸಮಾಜವಾದಿ ಪಕ್ಷದ ಕ್ರಾಂತಿರಥ ಯಾತ್ರೆ ಕೈಗೊಂಡಿದ್ದರು’ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p class="title">ಪಕ್ಷವು ಯಾತ್ರೆಯ ಮಾರ್ಗದ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಲಖನೌ: </strong>2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಜನರೊಂದಿಗೆ ಸಂಪರ್ಕ ಸಾಧಿಸುವ ಗುರಿ ಹೊಂದಿರುವ ಸಮಾಜವಾದಿ ಪಕ್ಷವು (ಎಸ್ಪಿ) ಅ. 12ರಿಂದ ‘ಸಮಾಜವಾದಿ ವಿಜಯ್ ಯಾತ್ರಾ’ ಆರಂಭಿಸಲಿದೆ ಎಂದು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮಂಗಳವಾರ ಘೋಷಿಸಿದ್ದಾರೆ.</p>.<p class="title">‘ಬಿಜೆಪಿ ಸರ್ಕಾರದ ಭ್ರಷ್ಟ, ನಿರಂಕುಶ ಮತ್ತು ದಮನಕಾರಿ ನೀತಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಈ ಯಾತ್ರೆಯ ಉದ್ದೇಶವಾಗಿದೆ’ ಎಂದು ಎಸ್ಪಿ ವಕ್ತಾರ ರಾಜೇಂದ್ರ ಚೌಧರಿ ತಿಳಿಸಿದ್ದಾರೆ.</p>.<p class="title"><strong>ಓದಿ:</strong><a href="https://www.prajavani.net/india-news/pm-narendra-modi-attacks-previous-sp-govt-in-up-says-it-created-hindrances-in-implementation-of-872850.html" itemprop="url">ವಸತಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿದ್ದ ಎಸ್ಪಿ ಸರ್ಕಾರ: ಮೋದಿ ವಾಗ್ದಾಳಿ</a></p>.<p class="title">‘ರಾಜ್ಯದಲ್ಲಿನ ಅಮಾನವೀಯ ಸರ್ಕಾರವನ್ನು ಕಿತ್ತೊಗೆಯಲು ಪಕ್ಷದ ಮುಖ್ಯಸ್ಥರಾದ ಅಖಿಲೇಶ್ ಯಾದವ್ ಅವರು ಅ. 12ರಿಂದ ಸಮಾಜವಾದಿ ವಿಜಯ್ ಯಾತ್ರೆಯನ್ನು ಕೈಗೊಳ್ಳುವರು. ಅಖಿಲೇಶ್ ಅವರು ಈ ಹಿಂದೆ ರಾಜ್ಯದಲ್ಲಿ ಬದಲಾವಣೆಗಾಗಿ 2001ರ ಜುಲೈ 31ರಂದು ‘ಕ್ರಾಂತಿ ಯಾತ್ರೆ’ ಹಾಗೂ 2011ರ ಸೆ. 12ರಂದು ‘ಸಮಾಜವಾದಿ ಪಕ್ಷದ ಕ್ರಾಂತಿರಥ ಯಾತ್ರೆ ಕೈಗೊಂಡಿದ್ದರು’ ಎಂದೂ ಅವರು ಮಾಹಿತಿ ನೀಡಿದ್ದಾರೆ.</p>.<p class="title">ಪಕ್ಷವು ಯಾತ್ರೆಯ ಮಾರ್ಗದ ವಿವರಗಳನ್ನು ಇನ್ನೂ ಹಂಚಿಕೊಂಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>