<p><strong>ಕರ್ನೂಲ್: </strong>ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರ ತಾಯಿ ವೈ.ಎಸ್ ವಿಜಯಮ್ಮ ಅವರು ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಪಟ್ಟಣದಲ್ಲಿ ಗುರುವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ಮಾಜಿ ಶಾಸಕಿ ವಿಜಯಮ್ಮ ಅವರು ತಮ್ಮ ಪತಿ ದಿವಂಗತ ವೈ.ಎಸ್ ರಾಜಶೇಖರರೆಡ್ಡಿ ಅವರ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲೆಂದು ಕರ್ನೂಲ್ಗೆ ಬಂದಿದ್ದರು. ಕರ್ನೂಲ್ನಿಂದ ಹೊರಟ ಅವರ ಕಾರಿನ ಚಕ್ರದ ಟೈರ್ ಒಡೆದು ಅಪಘಾತ ಸಂಭವಿಸಿದೆ. ಗುತ್ತಿ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು. </p>.<p>ಕಳೆದ ತಿಂಗಳು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ಅವರು ರಾಜೀನಾಮೆ ನೀಡಿದ್ದರು.</p>.<p>ತೆಲಂಗಾಣದಲ್ಲಿ ರಾಜಕೀಯ ಪಕ್ಷ ಕಟ್ಟಿರುವ ತಮ್ಮ ಪುತ್ರಿ ವೈ.ಎಸ್ ಶರ್ಮಿಳಾ ಅವರ ಪರವಾಗಿ ನಿಲ್ಲುವಂತೆ ರಾಜಕೀಯ ನಾಯಕರು ತಮ್ಮನ್ನು ಒತ್ತಾಯಿಸಿರುವುದಾಗಿ ವಿಜಯಮ್ಮ ಅವರು ಹೇಳಿದ್ದರು.</p>.<p>2009 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರು ದುರ್ಮರಣಕ್ಕೀಡಾಗಿದ್ದರು. ನಂತರ, ವಿಜಯಮ್ಮ ಕಡಪಾ ಜಿಲ್ಲೆಯ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ರಾಜಶೇಖರ ರೆಡ್ಡಿ ಅವರು ಹಿಂದೆ ಪ್ರತಿನಿಧಿಸುತ್ತಿದ್ದರು.</p>.<p>ಜಗನ್ ಮತ್ತು ವಿಜಯಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ, ಇಬ್ಬರೂ ಕ್ರಮವಾಗಿ ಕಡಪ ಲೋಕಸಭೆ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರಗಳಿಂದ ದಾಖಲೆಯ ಅಂತರದ ಗೆಲುವು ಸಾಧಿಸಿದ್ದರು.</p>.<p>ವಿಜಯಮ್ಮ ಅವರು 2014ರಲ್ಲಿ ವಿಶಾಖಪಟ್ಟಣದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/sharmila-launches-ysr-telangana-party-andra-pradesh-846328.html" itemprop="url">‘ವೈಎಸ್ಆರ್ ತೆಲಂಗಾಣ ಪಾರ್ಟಿ’ ಆರಂಭಿಸಿದ ವೈ.ಎಸ್.ಶರ್ಮಿಳಾ </a></p>.<p><a href="https://www.prajavani.net/stories/national/andhra-pradesh-high-court-604587.html" itemprop="url">ಜಗನ್ಗೆ ಚೂರಿ ಇರಿತ ಪ್ರಕರಣ: ತನಿಖೆ ಎನ್ಐಎಗೆ </a></p>.<p><a href="https://www.prajavani.net/stories/stateregional/nikhil-kumaraswamy-meets-643370.html" itemprop="url">ಆಂಧ್ರ ಪ್ರದೇಶ ಮುಖ್ಯಮಂತ್ರಿಜಗನ್ ಭೇಟಿ ಮಾಡಿ ಶುಭಕೋರಿದ ನಿಖಿಲ್ </a></p>.<p><a href="https://www.prajavani.net/india-news/jagan-elected-lifetime-president-of-ysr-congress-952811.html" itemprop="url">ವೈಎಸ್ಆರ್ ಕಾಂಗ್ರೆಸ್ ಅಜೀವ ಅಧ್ಯಕ್ಷರಾಗಿ ಜಗನ್ ಆಯ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರ್ನೂಲ್: </strong>ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ ರೆಡ್ಡಿ ಅವರ ತಾಯಿ ವೈ.ಎಸ್ ವಿಜಯಮ್ಮ ಅವರು ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಪಟ್ಟಣದಲ್ಲಿ ಗುರುವಾರ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ಮಾಜಿ ಶಾಸಕಿ ವಿಜಯಮ್ಮ ಅವರು ತಮ್ಮ ಪತಿ ದಿವಂಗತ ವೈ.ಎಸ್ ರಾಜಶೇಖರರೆಡ್ಡಿ ಅವರ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲೆಂದು ಕರ್ನೂಲ್ಗೆ ಬಂದಿದ್ದರು. ಕರ್ನೂಲ್ನಿಂದ ಹೊರಟ ಅವರ ಕಾರಿನ ಚಕ್ರದ ಟೈರ್ ಒಡೆದು ಅಪಘಾತ ಸಂಭವಿಸಿದೆ. ಗುತ್ತಿ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ವಿಜಯಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಅವರು ಮತ್ತೊಂದು ಕಾರಿನಲ್ಲಿ ಪ್ರಯಾಣ ಮುಂದುವರಿಸಿದರು. </p>.<p>ಕಳೆದ ತಿಂಗಳು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ಅವರು ರಾಜೀನಾಮೆ ನೀಡಿದ್ದರು.</p>.<p>ತೆಲಂಗಾಣದಲ್ಲಿ ರಾಜಕೀಯ ಪಕ್ಷ ಕಟ್ಟಿರುವ ತಮ್ಮ ಪುತ್ರಿ ವೈ.ಎಸ್ ಶರ್ಮಿಳಾ ಅವರ ಪರವಾಗಿ ನಿಲ್ಲುವಂತೆ ರಾಜಕೀಯ ನಾಯಕರು ತಮ್ಮನ್ನು ಒತ್ತಾಯಿಸಿರುವುದಾಗಿ ವಿಜಯಮ್ಮ ಅವರು ಹೇಳಿದ್ದರು.</p>.<p>2009 ರಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಆಂಧ್ರ ಪ್ರದೇಶದ ಅಂದಿನ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರು ದುರ್ಮರಣಕ್ಕೀಡಾಗಿದ್ದರು. ನಂತರ, ವಿಜಯಮ್ಮ ಕಡಪಾ ಜಿಲ್ಲೆಯ ಪುಲಿವೆಂದುಲ ಕ್ಷೇತ್ರದಿಂದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಕ್ಷೇತ್ರವನ್ನು ರಾಜಶೇಖರ ರೆಡ್ಡಿ ಅವರು ಹಿಂದೆ ಪ್ರತಿನಿಧಿಸುತ್ತಿದ್ದರು.</p>.<p>ಜಗನ್ ಮತ್ತು ವಿಜಯಮ್ಮ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ 2011 ರಲ್ಲಿ ನಡೆದ ಉಪಚುನಾವಣೆಯಲ್ಲಿ, ಇಬ್ಬರೂ ಕ್ರಮವಾಗಿ ಕಡಪ ಲೋಕಸಭೆ ಮತ್ತು ಪುಲಿವೆಂದುಲ ವಿಧಾನಸಭಾ ಕ್ಷೇತ್ರಗಳಿಂದ ದಾಖಲೆಯ ಅಂತರದ ಗೆಲುವು ಸಾಧಿಸಿದ್ದರು.</p>.<p>ವಿಜಯಮ್ಮ ಅವರು 2014ರಲ್ಲಿ ವಿಶಾಖಪಟ್ಟಣದಿಂದ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದರು.</p>.<p><strong>ಇವುಗಳನ್ನೂ ಓದಿ</strong></p>.<p><a href="https://www.prajavani.net/india-news/sharmila-launches-ysr-telangana-party-andra-pradesh-846328.html" itemprop="url">‘ವೈಎಸ್ಆರ್ ತೆಲಂಗಾಣ ಪಾರ್ಟಿ’ ಆರಂಭಿಸಿದ ವೈ.ಎಸ್.ಶರ್ಮಿಳಾ </a></p>.<p><a href="https://www.prajavani.net/stories/national/andhra-pradesh-high-court-604587.html" itemprop="url">ಜಗನ್ಗೆ ಚೂರಿ ಇರಿತ ಪ್ರಕರಣ: ತನಿಖೆ ಎನ್ಐಎಗೆ </a></p>.<p><a href="https://www.prajavani.net/stories/stateregional/nikhil-kumaraswamy-meets-643370.html" itemprop="url">ಆಂಧ್ರ ಪ್ರದೇಶ ಮುಖ್ಯಮಂತ್ರಿಜಗನ್ ಭೇಟಿ ಮಾಡಿ ಶುಭಕೋರಿದ ನಿಖಿಲ್ </a></p>.<p><a href="https://www.prajavani.net/india-news/jagan-elected-lifetime-president-of-ysr-congress-952811.html" itemprop="url">ವೈಎಸ್ಆರ್ ಕಾಂಗ್ರೆಸ್ ಅಜೀವ ಅಧ್ಯಕ್ಷರಾಗಿ ಜಗನ್ ಆಯ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>