‘ನನ್ನ ಪ್ರಕಾರ, ಆಕ್ಷೇಪಾರ್ಹ ವಿನಾಯಿತಿಗಳು (ಸೆಕ್ಷನ್ 375, ಸೆಕ್ಷನ್ 376 ಇ) ಸಂವಿಧಾನದ 14, 15, 19(1) (ಎ) ಹಾಗೂ 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಹೀಗಾಗಿ ವಿನಾಯಿತಿಗಳನ್ನು ತೆಗೆದುಹಾಕಬೇಕು’ ಎಂದು ನ್ಯಾಯಮೂರ್ತಿ ಶಖಧರ್ ಹೇಳಿದರು. ಈ ಮಾತಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹರಿಶಂಕರ್, ‘ಶಖಧರ್ ಅವರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಈ ವಿನಾಯಿತಿಗಳು ಸಂವಿಧಾನದ 14, 15, 19(1) (ಎ) ಹಾಗೂ 21ನೇ ವಿಧಿಗಳ ಉಲ್ಲಂಘನೆ ಆಗುವುದಿಲ್ಲ’ ಎಂದು ಹೇಳಿದರು.