<p><strong>ಶ್ರೀನಗರ:</strong> ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ರ ಮಾಜಿ ಸಲಹೆಗಾರ ಬಶೀರ್ ಅಹ್ಮದ್ ಖಾನ್ ಸೇರಿ 14 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.</p>.<p>ಇಬ್ಬರು ಹಾಲಿ ಐಎಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿ ನಡೆದಿದೆ. ಈ ಹಿಂದೆ, ನಕಲಿ ಮತ್ತು ತಿರುಚಲಾಗಿದ್ದ ದಾಖಲೆಗಳನ್ನು ಆಧರಿಸಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.</p>.<p>ಸಿಬಿಐ ವಕ್ತಾರರ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್, ಬನಿಹಾಲ್, ಬಾರಾಮುಲ್ಲಾ, ಜಮ್ಮು, ಕಿಶ್ತ್ವಾರ್ ಹಾಗೂ ಲೆಹ್, ದೆಹಲಿ ಮತ್ತು ಮಧ್ಯಪ್ರದೇಶದ ಭಿಂಡ್ ಸೇರಿದಂತೆ ಒಟ್ಟು 41 ಕಡೆ ಏಕಕಾಲದಲ್ಲಿ ದಾಳಿ ನಡೆಯಿತು.</p>.<p>2012 ರಿಂದ 2016ರ ಅವಧಿಯಲ್ಲಿ ಸಗಟು ರೂಪದಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬುದರ ಸಂಬಂಧ ಜಮ್ಮು ಮತ್ತು ಕಾಶ್ಮಿರ ಸರ್ಕಾರವು, ಎರಡು ಪ್ರತ್ಯೇಕ ದೂರನ್ನು ಸಿಬಿಐನಲ್ಲಿ ದಾಖಲಿಸಿತ್ತು.</p>.<p>ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸುಮಾರು 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಹರಲ್ಲದವರಿಗೂ ಸೇರಿದಂತೆ ಸುಮಾರು 2.78 ಲಕ್ಷದಷ್ಟು ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.</p>.<p>ಒಟ್ಟು 14 ಮಂದಿ ಹಾಲಿ ಮತ್ತು ನಿವೃತ್ತ ಐಎಎಸ್ ಹಾಗೂ ಕಾಶ್ಮೀರ ಆಡಳಿತ ಸೇವೆಯ (ಕೆಎಎಸ್) ಅಧಿಕೃತ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆದಿದೆ. ಇವರುಗಳು ಈ ಹಿಂದೆ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.</p>.<p>ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಲಾಗಿರುವ ಐವರು ಖಾಸಗಿಯವರು, ಏಜೆಂಟರು ಹಾಗೂ 10 ಮಂದಿ ಗನ್ ಹೌಸ್ ಆಥವಾ ವಿತರಕರಿಗೆ ಸೇರಿದ ಮನೆಗಳ ಮೇಲೂ ದಾಳಿ ನಡೆಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.</p>.<p>ದಾಳಿ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಪರವಾನಗಿ ವಿತರಣೆಗೆ ಸಂಬಂಧಿಸಿದ ದಾಖಲೆಗಳು, ಫಲಾನುಭವಿಗಳ ಪಟ್ಟಿ, ಹೂಡಿಕೆ ಹಾಗೂ ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದ ದಾಖಲೆಗಳು, ಕ್ರಯಪತ್ರಗಳು ಲಭ್ಯವಾಗಿದ್ದು ವಶಕ್ಕೆ ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಶಸ್ತ್ರಾಸ್ತ್ರ ಪರವಾನಗಿ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ರ ಮಾಜಿ ಸಲಹೆಗಾರ ಬಶೀರ್ ಅಹ್ಮದ್ ಖಾನ್ ಸೇರಿ 14 ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.</p>.<p>ಇಬ್ಬರು ಹಾಲಿ ಐಎಎಸ್ ಅಧಿಕಾರಿಗಳ ನಿವಾಸದ ಮೇಲೂ ದಾಳಿ ನಡೆದಿದೆ. ಈ ಹಿಂದೆ, ನಕಲಿ ಮತ್ತು ತಿರುಚಲಾಗಿದ್ದ ದಾಖಲೆಗಳನ್ನು ಆಧರಿಸಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.</p>.<p>ಸಿಬಿಐ ವಕ್ತಾರರ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್, ಬನಿಹಾಲ್, ಬಾರಾಮುಲ್ಲಾ, ಜಮ್ಮು, ಕಿಶ್ತ್ವಾರ್ ಹಾಗೂ ಲೆಹ್, ದೆಹಲಿ ಮತ್ತು ಮಧ್ಯಪ್ರದೇಶದ ಭಿಂಡ್ ಸೇರಿದಂತೆ ಒಟ್ಟು 41 ಕಡೆ ಏಕಕಾಲದಲ್ಲಿ ದಾಳಿ ನಡೆಯಿತು.</p>.<p>2012 ರಿಂದ 2016ರ ಅವಧಿಯಲ್ಲಿ ಸಗಟು ರೂಪದಲ್ಲಿ ಶಸ್ತ್ರಾಸ್ತ್ರ ಪರವಾನಗಿಗಳನ್ನು ನೀಡಲಾಗಿದೆ ಎಂಬುದರ ಸಂಬಂಧ ಜಮ್ಮು ಮತ್ತು ಕಾಶ್ಮಿರ ಸರ್ಕಾರವು, ಎರಡು ಪ್ರತ್ಯೇಕ ದೂರನ್ನು ಸಿಬಿಐನಲ್ಲಿ ದಾಖಲಿಸಿತ್ತು.</p>.<p>ಈ ಹಿಂದಿನ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಸುಮಾರು 22 ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಹರಲ್ಲದವರಿಗೂ ಸೇರಿದಂತೆ ಸುಮಾರು 2.78 ಲಕ್ಷದಷ್ಟು ಶಸ್ತ್ರಾಸ್ತ್ರ ಪರವಾನಗಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು.</p>.<p>ಒಟ್ಟು 14 ಮಂದಿ ಹಾಲಿ ಮತ್ತು ನಿವೃತ್ತ ಐಎಎಸ್ ಹಾಗೂ ಕಾಶ್ಮೀರ ಆಡಳಿತ ಸೇವೆಯ (ಕೆಎಎಸ್) ಅಧಿಕೃತ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆದಿದೆ. ಇವರುಗಳು ಈ ಹಿಂದೆ ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ್ದರು.</p>.<p>ಅಲ್ಲದೆ, ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಲಾಗಿರುವ ಐವರು ಖಾಸಗಿಯವರು, ಏಜೆಂಟರು ಹಾಗೂ 10 ಮಂದಿ ಗನ್ ಹೌಸ್ ಆಥವಾ ವಿತರಕರಿಗೆ ಸೇರಿದ ಮನೆಗಳ ಮೇಲೂ ದಾಳಿ ನಡೆಸಲಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.</p>.<p>ದಾಳಿ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಪರವಾನಗಿ ವಿತರಣೆಗೆ ಸಂಬಂಧಿಸಿದ ದಾಖಲೆಗಳು, ಫಲಾನುಭವಿಗಳ ಪಟ್ಟಿ, ಹೂಡಿಕೆ ಹಾಗೂ ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದ ದಾಖಲೆಗಳು, ಕ್ರಯಪತ್ರಗಳು ಲಭ್ಯವಾಗಿದ್ದು ವಶಕ್ಕೆ ಪಡೆಯಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>