ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ಭೇಟಿ ನೀಡುವ ಗುರಿ ಇಟ್ಟುಕೊಂಡಿರುವ ದೀಪಾಂಕರ್ ವಿಶೇಷವಾಗಿ ಅಶಿಕ್ಷಿತರಿಗೆ, ಕಾಡಂಚಿನಲ್ಲಿ ವಾಸವಾಗಿರುವವರಿಗೆ, ಸಂಪರ್ಕ ಸೌಲಭ್ಯಗಳಿಂದ ದೂರ ಉಳಿದಿರುವವರಿಗೆ, ವಯಸ್ಸಾದವರು ಹಾಗೂ ಲಸಿಕೆ ಬಗ್ಗೆ ಭಯ ಹೊಂದಿರುವವರ ಬಳಿ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಅವರು ಹಲವಾರು ಮಾರ್ಗಗಳನ್ನು ಕಂಡುಕೊಂಡಿದ್ಧಾರೆ.