<p><strong>ನವದೆಹಲಿ: </strong>ಪೂರ್ವ ದೆಹಲಿಯ ಸಂಜಯ್ ಸರೋವರ ಬಳಿ ಶನಿವಾರ 10 ಬಾತುಕೋಳಿಗಳ ಮೃತದೇಹ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವ ತನಕ ಸರೋವರವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಯೂರ್ ವಿಹಾರ ಮೂರನೇ ಹಂತದ ಸೆಂಟ್ರಲ್ ಪಾರ್ಕ್ ಬಳಿ 17 ಕಾಗೆಗಳ ಮೃತದೇಹ ಪತ್ತೆಯಾಗಿತ್ತು. ಇದರ ಬೆನ್ನಲೇ ಬಾತುಕೋಳಿಗಳೂ ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>‘ನಮಗೆ ಸರೋವರದಲ್ಲಿ 10 ಬಾತುಕೋಳಿಗಳ ಮೃತದೇಹ ಸಿಕ್ಕಿವೆ. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ವೈದ್ಯ ಡಾ.ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.</p>.<p>‘ಪಶ್ಚಿಮ ದೆಹಲಿಯ ದ್ವಾರಕಾ, ಮಯೂರ ವಿಹಾರ ಮೂರನೇ ಹಂತ, ಹಸ್ತಾಲಾ ಗ್ರಾಮದಲ್ಲಿ ಹಲವು ಕಾಗೆಗಳು ಸತ್ತಿವೆ ಎಂಬ ಮಾಹಿತಿ ಸಿಕ್ಕಿವೆ. ಆದರೆ ಪಕ್ಷಿಗಳ ಈ ರೀತಿ ಸಾವಿಗೆ ಹಕ್ಕಿ ಜ್ವರ ಕಾರಣವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸೋಮವಾರ ವರದಿ ಲಭ್ಯವಾಗಲಿದೆ’ ಎಂದು ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.</p>.<p>ದೆಹಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 35 ಕಾಗೆಗಳು ಸೇರಿದಂತೆ 50 ಪಕ್ಷಿಗಳು ಮೃತಪಟ್ಟಿವೆ. ಇದು ನಗರದ ಜನರಲ್ಲಿ ‘ಹಕ್ಕಿ ಜ್ವರ’ದ ಭೀತಿ ಸೃಷ್ಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಪೂರ್ವ ದೆಹಲಿಯ ಸಂಜಯ್ ಸರೋವರ ಬಳಿ ಶನಿವಾರ 10 ಬಾತುಕೋಳಿಗಳ ಮೃತದೇಹ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಸೂಚನೆ ಬರುವ ತನಕ ಸರೋವರವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮಯೂರ್ ವಿಹಾರ ಮೂರನೇ ಹಂತದ ಸೆಂಟ್ರಲ್ ಪಾರ್ಕ್ ಬಳಿ 17 ಕಾಗೆಗಳ ಮೃತದೇಹ ಪತ್ತೆಯಾಗಿತ್ತು. ಇದರ ಬೆನ್ನಲೇ ಬಾತುಕೋಳಿಗಳೂ ಮೃತಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>‘ನಮಗೆ ಸರೋವರದಲ್ಲಿ 10 ಬಾತುಕೋಳಿಗಳ ಮೃತದೇಹ ಸಿಕ್ಕಿವೆ. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪಶುಸಂಗೋಪನಾ ಇಲಾಖೆಯ ವೈದ್ಯ ಡಾ.ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.</p>.<p>‘ಪಶ್ಚಿಮ ದೆಹಲಿಯ ದ್ವಾರಕಾ, ಮಯೂರ ವಿಹಾರ ಮೂರನೇ ಹಂತ, ಹಸ್ತಾಲಾ ಗ್ರಾಮದಲ್ಲಿ ಹಲವು ಕಾಗೆಗಳು ಸತ್ತಿವೆ ಎಂಬ ಮಾಹಿತಿ ಸಿಕ್ಕಿವೆ. ಆದರೆ ಪಕ್ಷಿಗಳ ಈ ರೀತಿ ಸಾವಿಗೆ ಹಕ್ಕಿ ಜ್ವರ ಕಾರಣವೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಸೋಮವಾರ ವರದಿ ಲಭ್ಯವಾಗಲಿದೆ’ ಎಂದು ರಾಕೇಶ್ ಸಿಂಗ್ ಅವರು ಮಾಹಿತಿ ನೀಡಿದರು.</p>.<p>ದೆಹಲಿಯಲ್ಲಿ ಕಳೆದ ಕೆಲವು ದಿನಗಳಲ್ಲಿ 35 ಕಾಗೆಗಳು ಸೇರಿದಂತೆ 50 ಪಕ್ಷಿಗಳು ಮೃತಪಟ್ಟಿವೆ. ಇದು ನಗರದ ಜನರಲ್ಲಿ ‘ಹಕ್ಕಿ ಜ್ವರ’ದ ಭೀತಿ ಸೃಷ್ಟಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>