ನವದೆಹಲಿ: ಬಜೆಟ್ ಅಧಿವೇಶನದ ಉಳಿದಿರುವ ಕಲಾಪಗಳಿಗೆ ತಪ್ಪದೆ ಹಾಜರಿರುವಂತೆ ಬಿಜೆಪಿ ತನ್ನ ಲೋಕಸಭಾ ಸಂಸದರಿಗೆ ‘ವಿಪ್’ ಜಾರಿ ಮಾಡಿದೆ.
‘ವಿಪ್’ ಜಾರಿ ಗುರುವಾರದಿಂದ ಜಾರಿಗೆ ಬಂದಿದೆ. ಸೋಮವಾರದವರೆಗೂ ವಿಪ್ ಜಾರಿಯಲ್ಲಿ ಇರಲಿದೆ. ಕಲಾಪಕ್ಕೆ ಸಂಸದರು ಕಡ್ಡಾಯವಾಗಿ ಹಾಜರಿರಬೇಕು ಎಂದು ಬಿಜೆಪಿ ತಿಳಿಸಿದೆ.
ಬಜೆಟ್ ಅಧಿವೇಶನ ಸೋಮವಾರ ಮುಕ್ತಾಯವಾಗಲಿದೆ. ಆದರೆ ಕೆಲವು ಪಕ್ಷಗಳು ಕಲಾಪವನ್ನು ಶುಕ್ರವಾರದವರೆಗೂ ಮುಂದುವರೆಸಬೇಕು ಎಂದು ಆಗ್ರಹಿಸಿವೆ.
ಸದ್ಯ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಯುತ್ತಿದೆ. ಅದಾನಿ ಸಮೂಹ ಗದ್ದಲದಿಂದ ಕಲಾಪವನ್ನು ಹಲವು ಸಲ ಮುಂದೂಡಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.