ಮುಂಬೈ: ಇಲ್ಲಿನ ತನ್ನ ಜುಹು ಬಂಗಲೆಗೆ ಮಾಡಿದ ಮಾರ್ಪಾಡುಗಳಿಗೆ ಸಂಬಂಧಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಕೇಂದ್ರ ಸಚಿವ ನಾರಾಯಣ ರಾಣೆ ಅವರ ಕುಟುಂಬಕ್ಕೆ ಹೊಸದಾಗಿ ನೋಟಿಸ್ ಜಾರಿ ಮಾಡಿದೆ.
ಇನ್ನು 15 ದಿನಗಳಲ್ಲಿ ಜುಹು ಬಂಗಲೆಯಲ್ಲಿ ಮಾಡಿರುವ ಬದಲಾವಣೆಗಳನ್ನು ತೆಗೆದುಹಾಕುವಂತೆ ಬಿಎಂಸಿ ಸೂಚಿಸಿದೆ.
‘ಒಂದು ವೇಳೆ ಕ್ರಮ ಕೈಗೊಳ್ಳಲು ಮಾಲೀಕರು ವಿಫಲರಾದರೆ ಪಾಲಿಕೆಯು ಅವರಿಂದ ಬದಲಾವಣೆ ತೆರವಿಗೆ ಆಗುವ ವೆಚ್ಚವನ್ನು ವಸೂಲಿ ಮಾಡುತ್ತದೆ’ ಎಂದು ಮಾರ್ಚ್ 16 ರಂದು ಬಿಜೆಪಿ ಮುಖಂಡ ರಾಣೆ ಅವರ ಪತ್ನಿ ಹಾಗೂ ಪುತ್ರರಿಗೆ ನೀಡಿರುವ ನೋಟಿಸ್ನಲ್ಲಿ ಹೇಳಿದೆ.