ಅಹಮದಬಾದ್ (ಪಿಟಿಐ):ಭಾರತ – ಪಾಕಿಸ್ತಾನ ಗಡಿಯ ಸಮೀಪದ ಗುಜರಾತ್ನ ಕಚ್ ಜಿಲ್ಲೆಯ ಕರಾವಳಿಯಲ್ಲಿಗಡಿ ಭದ್ರತಾ ಪಡೆಯು (ಬಿಎಸ್ಎಫ್) ಪಾಕಿಸ್ತಾನದ ಮೂವರು ಮೀನುಗಾರರನ್ನು ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದ ಎಂದು ತಿಳಿಸಿದೆ.
ರಾತ್ರಿಪೂರ್ತಿ ವಿಶೇಷ ಕಾರ್ಯಾಚಾರಣೆ ನಡೆಸಿ ಸೋಮವಾರ ಮುಂಜಾನೆ ಮೂವರು ಮೀನುಗಾರರನ್ನು ಬಂಧಿಸಲಾಗಿದೆ.
ಭಾರತದ ಗಡಿಯನ್ನು ಪಾಕಿಸ್ತಾನದ ಮೀನುಗಾರರು ಪ್ರವೇಶಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಬಿಎಸ್ಎಫ್ ಪಡೆಯು ಕಾರ್ಯಾಚರಣೆ ಆರಂಭಿಸಿ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.