ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರವು 'ರಾಕ್ಷಸತ್ವ ಮೆರೆದಿದೆ': ಪೆಗಾಸಸ್ ಗೂಢಚರ್ಯೆ ಬಗ್ಗೆ ಮೆಹಬೂಬಾ ವಾಗ್ದಾಳಿ

Last Updated 23 ಜುಲೈ 2021, 17:32 IST
ಅಕ್ಷರ ಗಾತ್ರ

ಶ್ರೀನಗರ: ಪೆಗಾಸಸ್ ಗೂಢಚರ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರವು ‘ರಾಕ್ಷಸನಂತಾಗಿ ಹೋಗಿದ್ದು, ಮೂಲಭೂತ ಮಾನವ ಹಕ್ಕುಗಳನ್ನು ನಿರ್ಭಯವಾಗಿ ನಾಶಪಡಿಸುತ್ತಿದೆ.’ಎಂದು ಕಿಡಿಕಾರಿದ್ದಾರೆ.

‘ಭಯೋತ್ಪಾದಕರ ವಿರುದ್ಧ ಬಳಸುವ ಕುತಂತ್ರಾಂಶವನ್ನು ರಾಜಕೀಯ ವಿರೋಧಿಗಳು ಮತ್ತು ಭಿನ್ನಮತೀಯರನ್ನು ಎದುರಿಸಲು ಶಸ್ತ್ರಾಸ್ತ್ರವನ್ನಾಗಿ ಮಾಡಿಕೊಳ್ಳಲಾಗಿದೆ. ವಸಾಹತುಶಾಹಿ ಯುಗದಲ್ಲಿ ಬ್ರಿಟಿಷರು ಭಾರತೀಯರನ್ನು ಹೇಗೆ ಅನುಮಾನಿಸುತ್ತಿದ್ದರೋ ಮತ್ತು ಉಪಚರಿಸುತ್ತಿದ್ದರೋ ಅದೇ ರೀತಿ ಮಾಡುತ್ತಿದೆ. ಭಾರತ ಸರ್ಕಾರವು ರಾಕ್ಷಸನಾಗಿ ಹೋಗಿದೆ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ನಿರ್ಭಯವಾಗಿ ನಾಶಪಡಿಸುತ್ತಿದೆ.’ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸೋರಿಕೆಯಾಗಿರುವ ಪೆಗಾಸಸ್ ಗೂಢಚರ್ಯೆ ಕುರಿತಾದ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, ತನ್ನ ಪಕ್ಷದ ಸದಸ್ಯರು ಮತ್ತು ಅವರ ಕುಟುಂಬದ ಫೋನ್ ಸಂಖ್ಯೆಗಳು ಟಾರ್ಗೆಟ್ ಆಗಿರುವವರ ಪಟ್ಟಿಯಲ್ಲಿ ಸೇರಿರಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT