<p class="title"><strong>ದುರ್ಗ್, ಛತ್ತೀಸಗಢ:</strong> ವಾಮಾಚಾರ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಸಂಬಂಧಿಕರು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಗಳ ಮೇಲೆ ನಡೆಯುವಂತೆ ಮಾಡಿದ ಘಟನೆ ಛತ್ತೀಸಗಢದ ದುರ್ಗ್ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. </p>.<p class="bodytext">ದುರ್ಗ್ ಪಟ್ಟಣದ ಕೈಲಾಶ್ ನಗರದಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದ್ದು, ಮಮತಾ ನಿಷಾದ್ ಎಂಬ ಮಹಿಳೆಯ ಕಾಲುಗಳು ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p class="bodytext">ಘಟನೆ ಸಂಬಂಧ ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ಬಂಧಿಸಲಾಗಿದ್ದು, ತಾಂತ್ರಿಕನೆಂದು ಹೇಳಿಕೊಂಡ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p class="bodytext">‘ನಾನು ವಾಮಾಚಾರದಲ್ಲಿ ತೊಡಗಿದ್ದೇನೆ ಎಂದು ಶಂಕಿಸಿ ಪತಿಯ ತಮ್ಮ ಮತ್ತು ಆತನ ಹೆಂಡತಿ ಹಾಗೂ ನಾದಿನಿ ನನಗೆ ಕಿರುಕುಳ ನೀಡುತ್ತಿದ್ದರು. ಮಾರ್ಚ್ 20ರಂದು ನನ್ನ ಪತಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಮೂವರೂ ನನ್ನನ್ನು ಕೈಲಾಶ್ ನಗರದ ತಾಂತ್ರಿಕರೊಬ್ಬರ ಬಳಿಗೆ ಕರೆದೊಯ್ದು, ವಾಮಾಚಾರ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಯ ಮೇಲೆ ನಡೆಯಲು ಹೇಳಿದರು. ತಾಂತ್ರಿಕ ನನ್ನನ್ನು ಸುಡುತ್ತಿರುವ ಕಲ್ಲಿದ್ದಲ ಮೇಲೆ 12 ಬಾರಿ ಹಾಗೂ ಕಬ್ಬಿಣದ ಮೊಳೆಗಳ ಮೇಲೆ 9 ಬಾರಿ ನಡೆಯುವಂತೆ ಮಾಡಿದ’ಎಂದು ಸಂತ್ರಸ್ತೆ ಮಮತಾ ಆರೋಪಿಸಿದ್ದಾರೆ. </p>.<p class="bodytext">ಪತಿಯು ಮರಳಿದ ಬಳಿಕ ಸಂತ್ರಸ್ತೆಯು ತನ್ನನ್ನು ‘ಅಗ್ನಿಪರೀಕ್ಷೆ’ಗೊಳಪಡಿಸಿದ ಕುರಿತು ತಿಳಿಸಿದ್ದಾಳೆ. ಬಳಿಕ ಪತಿಯು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. </p>.<p class="bodytext">ಘಟನೆ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆಯು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ದುರ್ಗ್, ಛತ್ತೀಸಗಢ:</strong> ವಾಮಾಚಾರ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಸಂಬಂಧಿಕರು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಗಳ ಮೇಲೆ ನಡೆಯುವಂತೆ ಮಾಡಿದ ಘಟನೆ ಛತ್ತೀಸಗಢದ ದುರ್ಗ್ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. </p>.<p class="bodytext">ದುರ್ಗ್ ಪಟ್ಟಣದ ಕೈಲಾಶ್ ನಗರದಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದ್ದು, ಮಮತಾ ನಿಷಾದ್ ಎಂಬ ಮಹಿಳೆಯ ಕಾಲುಗಳು ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.</p>.<p class="bodytext">ಘಟನೆ ಸಂಬಂಧ ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ಬಂಧಿಸಲಾಗಿದ್ದು, ತಾಂತ್ರಿಕನೆಂದು ಹೇಳಿಕೊಂಡ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. </p>.<p class="bodytext">‘ನಾನು ವಾಮಾಚಾರದಲ್ಲಿ ತೊಡಗಿದ್ದೇನೆ ಎಂದು ಶಂಕಿಸಿ ಪತಿಯ ತಮ್ಮ ಮತ್ತು ಆತನ ಹೆಂಡತಿ ಹಾಗೂ ನಾದಿನಿ ನನಗೆ ಕಿರುಕುಳ ನೀಡುತ್ತಿದ್ದರು. ಮಾರ್ಚ್ 20ರಂದು ನನ್ನ ಪತಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಮೂವರೂ ನನ್ನನ್ನು ಕೈಲಾಶ್ ನಗರದ ತಾಂತ್ರಿಕರೊಬ್ಬರ ಬಳಿಗೆ ಕರೆದೊಯ್ದು, ವಾಮಾಚಾರ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಯ ಮೇಲೆ ನಡೆಯಲು ಹೇಳಿದರು. ತಾಂತ್ರಿಕ ನನ್ನನ್ನು ಸುಡುತ್ತಿರುವ ಕಲ್ಲಿದ್ದಲ ಮೇಲೆ 12 ಬಾರಿ ಹಾಗೂ ಕಬ್ಬಿಣದ ಮೊಳೆಗಳ ಮೇಲೆ 9 ಬಾರಿ ನಡೆಯುವಂತೆ ಮಾಡಿದ’ಎಂದು ಸಂತ್ರಸ್ತೆ ಮಮತಾ ಆರೋಪಿಸಿದ್ದಾರೆ. </p>.<p class="bodytext">ಪತಿಯು ಮರಳಿದ ಬಳಿಕ ಸಂತ್ರಸ್ತೆಯು ತನ್ನನ್ನು ‘ಅಗ್ನಿಪರೀಕ್ಷೆ’ಗೊಳಪಡಿಸಿದ ಕುರಿತು ತಿಳಿಸಿದ್ದಾಳೆ. ಬಳಿಕ ಪತಿಯು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ. </p>.<p class="bodytext">ಘಟನೆ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆಯು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>