ಇತ್ತೀಚಿನ ವರ್ಷಗಳಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಮಾತುಗಳಿಗೆ ಹೆಚ್ಚಿನ ಅವಕಾಶ ಇರುತ್ತಿರಲಿಲ್ಲ. ಅನುರಾಗ್ ಠಾಕೂರ್, ಪ್ರಸಾರ ಖಾತೆ ರಾಜ್ಯಮಂತ್ರಿ ಡಾ.ಮುರುಗನ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ರಾಜ್ಯಪಾಲ ಶ್ರೀಧರನ್ ಪಿಳ್ಳೈ ಮತ್ತಿತರರು ಭಾಷಣ ಮಾಡಿ ಸಿನಿಮಾ, ಕಲೆ, ಕ್ರೀಡೆ ಮತ್ತಿತರ ರಂಗದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ನಾಯಕತ್ವವೇ ಕಾರಣ ಎಂದು ಪ್ರಶಂಸಿಸಿದರು. ಇನ್ನು ಕಾರ್ಯಕ್ರಮ ನಿರೂಪಕ ಕೇಳಿದ ಕೆಲ ಪ್ರಶ್ನೆಗಳಿಗೆ ವೇದಿಕೆಗೆ ಬಂದ ಅನೇಕರು ಉತ್ತರಿಸಿದ್ದರಿಂದ ಉದ್ಘಾಟನಾ ಸಮಾರಂಭದಲ್ಲಿ ಮಾತುಗಳು ವಿಜೃಂಭಿಸಿದವು.