<p class="title"><strong>ನವದೆಹಲಿ (ಪಿಟಿಐ):</strong> ಭಾರತದತ್ತ ಹೊರಟಿದ್ದ ಎರಡು ಎಮಿರೇಟ್ಟ್ ವಿಮಾನಗಳ ನಡುವೆ ದುಬೈ ವಿಮಾನನಿಲ್ದಾಣದ ರನ್ವೇನಲ್ಲಿ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿ ತಪ್ಪಿದ ಘಟನೆ ಕುರಿತು ವರದಿ ಸಲ್ಲಿಸಲು ಯುಎಇಗೆ ಭಾರತ ಕೇಳಿದೆ.</p>.<p class="title">ಭಾರತ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡಿಜಿಸಿಎಯು, ಉಲ್ಲೇಖಿತ ಘಟನೆಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡಬೇಕು ಎಂದು ಯುಎಇಯ ವಿಮಾನಯಾನ ಪ್ರಾಧಿಕಾರಕ್ಕೆ ಕೋರಿದೆ.</p>.<p class="title">ಜ. 9ರಂದು ದುಬೈ ವಿಮಾನನಿಲ್ದಾಣದಲ್ಲಿ ದುಬೈ– ಹೈದರಾಬಾದ್ ಮತ್ತು ದುಬೈ–ಬೆಂಗಳೂರು ನಡುವಣ ಪ್ರಯಾಣಿಕರ ವಿಮಾನಗಳ ನಡುವೆ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿಯೇ ತಪ್ಪಿತ್ತು.</p>.<p class="title">ಹೈದರಾಬಾದ್ ವಿಮಾನ ಗಗನಕ್ಕೆ ಚಿಮ್ಮುವ ವೇಳೆಗೆ ಅದೇ ರನ್ವೇನಲ್ಲಿಯೇ ಬೆಂಗಳೂರು ವಿಮಾನವು ಬಂದಿತ್ತು. ಇದು ಗೊತ್ತಾದ ಕೂಡಲೇ ವಿಮಾನನಿಲ್ದಾಣದ ನಿಯಂತ್ರಕರು ದುಬೈ–ಹೈದರಾಬಾದ್ ವಿಮಾನಕ್ಕೆ ಗಗನಕ್ಕೆ ಚಿಮ್ಮಲು (ಟೇಕ್ ಆಫ್) ಅವಕಾಶ ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p class="title">ಡಿಜಿಸಿಎ ಮುಖ್ಯಸ್ಥ ಅರುಣ್ಕುಮಾರ್ ಅವರು, ಐಸಿಎಒ (ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಅನುಸಾರ ಎರಡೂ ವಿಮಾನಗಳು ನಿಖರ ಸಮಯವನ್ನು ಪಾಲನೆ ಮಾಡಿದ್ದವು. ಈ ಬಗ್ಗೆ ಅದು ತನಿಖೆ ನಡೆಸಲಿದೆ ಎಂದರು.</p>.<p>ಯುಇಇ ವಕ್ತಾರರು ಈ ಕುರಿತ ಹೇಳಿಕೆಯಲ್ಲಿ, ಒಂದೇ ರನ್ವೇನಲ್ಲಿ ವಿಮಾನ ಬರುತ್ತಿರುವುದು ಗೊತ್ತಾದಂತೆ ವಿಮಾನಯಾನ ನಿಯಂತ್ರಕರು ಟೇಕ್ ಆಫ್ಗೆ ಅನುಮತಿ ನಿರಾಕರಿಸಿದರು. ಯಾವುದೇ ವಿಮಾನ ಸ್ವಲ್ಪವು ಜಖಂಗೊಂಡಿಲ್ಲ, ಯಾರಿಗೂ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಸುರಕ್ಷತೆಗೆ ಎಂದಿಗೂ ಮೊದಲ ಆದ್ಯತೆ ನೀಡಲಿದ್ದು, ಈ ಬಗ್ಗೆ ಆಂತರಿಕವಾಗಿ ಪರಿಶೀಲನೆ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ (ಪಿಟಿಐ):</strong> ಭಾರತದತ್ತ ಹೊರಟಿದ್ದ ಎರಡು ಎಮಿರೇಟ್ಟ್ ವಿಮಾನಗಳ ನಡುವೆ ದುಬೈ ವಿಮಾನನಿಲ್ದಾಣದ ರನ್ವೇನಲ್ಲಿ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿ ತಪ್ಪಿದ ಘಟನೆ ಕುರಿತು ವರದಿ ಸಲ್ಲಿಸಲು ಯುಎಇಗೆ ಭಾರತ ಕೇಳಿದೆ.</p>.<p class="title">ಭಾರತ ವಿಮಾನಯಾನ ನಿಯಂತ್ರಣ ಸಂಸ್ಥೆಯಾದ ಡಿಜಿಸಿಎಯು, ಉಲ್ಲೇಖಿತ ಘಟನೆಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ನೀಡಬೇಕು ಎಂದು ಯುಎಇಯ ವಿಮಾನಯಾನ ಪ್ರಾಧಿಕಾರಕ್ಕೆ ಕೋರಿದೆ.</p>.<p class="title">ಜ. 9ರಂದು ದುಬೈ ವಿಮಾನನಿಲ್ದಾಣದಲ್ಲಿ ದುಬೈ– ಹೈದರಾಬಾದ್ ಮತ್ತು ದುಬೈ–ಬೆಂಗಳೂರು ನಡುವಣ ಪ್ರಯಾಣಿಕರ ವಿಮಾನಗಳ ನಡುವೆ ಅಪಘಾತ ಸಂಭವಿಸುವುದು ಸ್ವಲ್ಪದರಲ್ಲಿಯೇ ತಪ್ಪಿತ್ತು.</p>.<p class="title">ಹೈದರಾಬಾದ್ ವಿಮಾನ ಗಗನಕ್ಕೆ ಚಿಮ್ಮುವ ವೇಳೆಗೆ ಅದೇ ರನ್ವೇನಲ್ಲಿಯೇ ಬೆಂಗಳೂರು ವಿಮಾನವು ಬಂದಿತ್ತು. ಇದು ಗೊತ್ತಾದ ಕೂಡಲೇ ವಿಮಾನನಿಲ್ದಾಣದ ನಿಯಂತ್ರಕರು ದುಬೈ–ಹೈದರಾಬಾದ್ ವಿಮಾನಕ್ಕೆ ಗಗನಕ್ಕೆ ಚಿಮ್ಮಲು (ಟೇಕ್ ಆಫ್) ಅವಕಾಶ ನಿರಾಕರಿಸಿದ್ದರು ಎಂದು ಮೂಲಗಳು ತಿಳಿಸಿವೆ.</p>.<p class="title">ಡಿಜಿಸಿಎ ಮುಖ್ಯಸ್ಥ ಅರುಣ್ಕುಮಾರ್ ಅವರು, ಐಸಿಎಒ (ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಅನುಸಾರ ಎರಡೂ ವಿಮಾನಗಳು ನಿಖರ ಸಮಯವನ್ನು ಪಾಲನೆ ಮಾಡಿದ್ದವು. ಈ ಬಗ್ಗೆ ಅದು ತನಿಖೆ ನಡೆಸಲಿದೆ ಎಂದರು.</p>.<p>ಯುಇಇ ವಕ್ತಾರರು ಈ ಕುರಿತ ಹೇಳಿಕೆಯಲ್ಲಿ, ಒಂದೇ ರನ್ವೇನಲ್ಲಿ ವಿಮಾನ ಬರುತ್ತಿರುವುದು ಗೊತ್ತಾದಂತೆ ವಿಮಾನಯಾನ ನಿಯಂತ್ರಕರು ಟೇಕ್ ಆಫ್ಗೆ ಅನುಮತಿ ನಿರಾಕರಿಸಿದರು. ಯಾವುದೇ ವಿಮಾನ ಸ್ವಲ್ಪವು ಜಖಂಗೊಂಡಿಲ್ಲ, ಯಾರಿಗೂ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.</p>.<p>ಸುರಕ್ಷತೆಗೆ ಎಂದಿಗೂ ಮೊದಲ ಆದ್ಯತೆ ನೀಡಲಿದ್ದು, ಈ ಬಗ್ಗೆ ಆಂತರಿಕವಾಗಿ ಪರಿಶೀಲನೆ ನಡೆದಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>