ಆದರೆ ಈ ದೂರುಗಳನ್ನು ತಳ್ಳಿ ಹಾಕಿರುವಎಐಸಿಸಿ ಸಂಶೋಧನಾ ಇಲಾಖೆಯ ಮುಖ್ಯಸ್ಥ ರಾಜೀವ್ ಗೌಡ ಅವರು, ‘ಬಿಜೆಪಿ, ಕೋವಿಡ್ ಪರಿಸ್ಥಿತಿಯ ದುರುಪಯೋಗದ ಕುರಿತಾಗಿ ನಕಲಿ ಟೂಲ್ಕಿಟ್ ಅನ್ನು ಪ್ರಚಾರ ಮಾಡುತ್ತಿದೆ. ಈ ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಪರಿಹಾರ ಒದಗಿಸುವುದನ್ನು ಬಿಟ್ಟು, ನಾಚಿಕೆಯಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಸಂಬಿತ್ ಪಾತ್ರಾ ವಿರುದ್ಧ ದೂರು ದಾಖಲಿಸುವುದಾಗಿ’ ಟ್ವೀಟ್ ಮಾಡಿದ್ದಾರೆ.