<p class="title"><strong>ಗುವಾಹಟಿ</strong>: ‘ಅಸ್ಸಾಂ ರಾಜ್ಯವನ್ನು ಕಡೆಗಣಿಸಿರುವ ಚಾರಿತ್ರಿಕ ಪ್ರಮಾದವನ್ನು ನನ್ನ ನೇತೃತ್ವದ ಸರ್ಕಾರ ಸರಿಪಡಿಸಲಿದೆ. ರಾಜ್ಯದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದರು.</p>.<p class="title">ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿದ್ದರೆ, ರಾಜ್ಯ ಮತ್ತು ದೇಶದ ಇತರೆ ಭಾಗಗಳ ನಡುವಣ ಸಾಂಸ್ಕೃತಿಕ ಮತ್ತು ಭೌಗೋಳಿಕ ಅಂತರವು ಕುಗ್ಗಲೂ ನೆರವಾಗಲಿದೆ ಎಂದೂ ಅವರು ಪ್ರತಿಪಾದಿಸಿದರು.</p>.<p class="title">ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಅಸ್ಸಾಂನಲ್ಲಿ ತಲಾ ಆದಾಯ ಹೆಚ್ಚಿತ್ತು. ಆದರೆ, 1947ರ ನಂತರ ರಾಜ್ಯದ ಅಭಿವೃದ್ಧಿ ಕಡೆಗಣಿಸಲಾಯಿತು. ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಕೆಲಸ ವಾಜಪೇಯಿ ಅವರು ಪ್ರಧಾನಿಯಾದ ನಂತರ ಶುರುವಾಯಿತು. ತಮ್ಮ ನೇತೃತ್ವದ ಸರ್ಕಾರ ಇದನ್ನು ಆದ್ಯತೆಯಾಗಿ ಪರಿಗಣಿಸಿದೆ ಎಂದೂ ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ₹ 3,231 ಕೋಟಿ ಅಂದಾಜು ವೆಚ್ಚದ ‘ಮಹಾಬಾಹು ಬ್ರಹ್ಮಪುತ್ರ’ ಯೋಜನೆಗೆ ಚಾಲನೆ ನೀಡಿದರು. ಜೋಗಿಗೋಪಾ ಬಳಿ ಒಳನಾಡು ಟರ್ಮಿನಲ್ ಮತ್ತು ಪಂಡು, ಜೋಗಿಗೋಪಾ, ನೀಮತಿ, ಬಿಸ್ವನಾಥ್ ಘಾಟ್ ಬಳಿ ಪ್ರವಾಸಿ ತಾಣ ಅಭಿವೃದ್ಧಿ ಉದ್ದೇಶಿತ ಯೋಜನೆಯ ಭಾಗವಾಗಿದೆ.</p>.<p>ಮಹಾಬಾಬು ಬ್ರಹ್ಮಪುತ್ರ ಯೋಜನೆಯಡಿ ರಾಜ್ಯ, ದೇಶದ ಇತರೆ ಭಾಗದ ಜೊತೆಗೆ ಸಂಪರ್ಕ ಕಲ್ಪಿಸಲು ನೀರಿನೊಳಗಡೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು ಎಂದರು. ಇದೇ ಸಂದರ್ಭ ಅತಿದೊಡ್ಡದಾದ, 19 ಕಿ.ಮೀ. ಉದ್ದದ ಸೇತುವೆ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ಗುವಾಹಟಿ</strong>: ‘ಅಸ್ಸಾಂ ರಾಜ್ಯವನ್ನು ಕಡೆಗಣಿಸಿರುವ ಚಾರಿತ್ರಿಕ ಪ್ರಮಾದವನ್ನು ನನ್ನ ನೇತೃತ್ವದ ಸರ್ಕಾರ ಸರಿಪಡಿಸಲಿದೆ. ರಾಜ್ಯದ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಆದ್ಯತೆಯಾಗಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದರು.</p>.<p class="title">ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿದ್ದರೆ, ರಾಜ್ಯ ಮತ್ತು ದೇಶದ ಇತರೆ ಭಾಗಗಳ ನಡುವಣ ಸಾಂಸ್ಕೃತಿಕ ಮತ್ತು ಭೌಗೋಳಿಕ ಅಂತರವು ಕುಗ್ಗಲೂ ನೆರವಾಗಲಿದೆ ಎಂದೂ ಅವರು ಪ್ರತಿಪಾದಿಸಿದರು.</p>.<p class="title">ಸ್ವಾತಂತ್ರ್ಯ ಬರುವುದಕ್ಕೂ ಮೊದಲು ಅಸ್ಸಾಂನಲ್ಲಿ ತಲಾ ಆದಾಯ ಹೆಚ್ಚಿತ್ತು. ಆದರೆ, 1947ರ ನಂತರ ರಾಜ್ಯದ ಅಭಿವೃದ್ಧಿ ಕಡೆಗಣಿಸಲಾಯಿತು. ಈ ಐತಿಹಾಸಿಕ ಪ್ರಮಾದವನ್ನು ಸರಿಪಡಿಸುವ ಕೆಲಸ ವಾಜಪೇಯಿ ಅವರು ಪ್ರಧಾನಿಯಾದ ನಂತರ ಶುರುವಾಯಿತು. ತಮ್ಮ ನೇತೃತ್ವದ ಸರ್ಕಾರ ಇದನ್ನು ಆದ್ಯತೆಯಾಗಿ ಪರಿಗಣಿಸಿದೆ ಎಂದೂ ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ₹ 3,231 ಕೋಟಿ ಅಂದಾಜು ವೆಚ್ಚದ ‘ಮಹಾಬಾಹು ಬ್ರಹ್ಮಪುತ್ರ’ ಯೋಜನೆಗೆ ಚಾಲನೆ ನೀಡಿದರು. ಜೋಗಿಗೋಪಾ ಬಳಿ ಒಳನಾಡು ಟರ್ಮಿನಲ್ ಮತ್ತು ಪಂಡು, ಜೋಗಿಗೋಪಾ, ನೀಮತಿ, ಬಿಸ್ವನಾಥ್ ಘಾಟ್ ಬಳಿ ಪ್ರವಾಸಿ ತಾಣ ಅಭಿವೃದ್ಧಿ ಉದ್ದೇಶಿತ ಯೋಜನೆಯ ಭಾಗವಾಗಿದೆ.</p>.<p>ಮಹಾಬಾಬು ಬ್ರಹ್ಮಪುತ್ರ ಯೋಜನೆಯಡಿ ರಾಜ್ಯ, ದೇಶದ ಇತರೆ ಭಾಗದ ಜೊತೆಗೆ ಸಂಪರ್ಕ ಕಲ್ಪಿಸಲು ನೀರಿನೊಳಗಡೆ ಮಾರ್ಗ ಅಭಿವೃದ್ಧಿಪಡಿಸಲಾಗುವುದು ಎಂದರು. ಇದೇ ಸಂದರ್ಭ ಅತಿದೊಡ್ಡದಾದ, 19 ಕಿ.ಮೀ. ಉದ್ದದ ಸೇತುವೆ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>