ವಿಚಾರಣಾ ಹಂತದಲ್ಲಿರುವ 15,900 ಕೈದಿಗಳು ಸೇರಿದಂತೆ ಒಟ್ಟು 21,046 ಕೈದಿಗಳು ರಾಜ್ಯದ 30 ಕಾರಾಗೃಹಗಳಲ್ಲಿದ್ದಾರೆ. ಈ ಕಾರಾಗೃಹಗಳ ಒಟ್ಟು ಸಾಮರ್ಥ್ಯ 16,700 ಮಾತ್ರ ಇದೆ. ಜಾರ್ಖಂಡ್ ಹೈಕೋರ್ಟ್ನ ನ್ಯಾಯಮೂರ್ತಿ ಎ.ಕೆ. ಸಿಂಗ್, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಅರುಣ್ ಎಕ್ಕಾ ಮತ್ತು ಕಾರಾಗೃಹ ಇಲಾಖೆಯ ಐಜಿ ಬೀರೇಂದ್ರ ಭೂಷಣ್ ಅವರನ್ನೊಳಗೊಂಡ ಉನ್ನತಾಧಿಕಾರದ ಸಮಿತಿಯು ಮೇ 17ರಂದು ಸಭೆ ನಡೆಸಿ, ಪರಿಸ್ಥಿತಿಯನ್ನು ಅವಲೋಕಿಸಿದೆ. ನಿಯಮಗಳಿಗೆ ಅನುಸಾರವಾಗಿ ಜಾಮೀನು ಇಲ್ಲವೆ ಪೆರೋಲ್ ಅಡಿಯಲ್ಲಿ ಬಿಡುಗಡೆ ಮಾಡಲು ಅರ್ಹರಿರುವ ಕೈದಿಗಳ ಪಟ್ಟಿಯನ್ನು ತಯಾರಿಸುವಂತೆ ಜೈಲು ಅಧೀಕ್ಷಕರುಗಳಿಗೆ ಸೂಚಿಸಲಾಗಿದೆ.