ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿ, ಹಣ ಅಕ್ರಮ ವರ್ಗಾವಣೆ ಪ್ರಕರಣದ ಐವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ದೆಹಲಿಯ ಸಿಟಿ ನ್ಯಾಯಾಲಯವೊಂದು ಗುರುವಾರ ವಜಾಗೊಳಿಸಿದೆ.
ಶರತ್ ರೆಡ್ಡಿ, ಅಭಿಷೇಕ್ ಬೊಯಿಂಪಲ್ಲಿ, ವಿಜಯ್ ನಾಯರ್, ಬಿನೋಯ್ ಬಾಬು ಹಾಗೂ ಸಮೀರ್ ಮಹೇಂದ್ರು ಅವರ ಅರ್ಜಿಗಳನ್ನು ತಿರಸ್ಕರಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರು, ‘ಆರೋಪಿಗಳಿಗೆ ಜಾಮೀನು ನೀಡಲು ಇದು ಸೂಕ್ತ ಸಮಯವಲ್ಲ’ ಎಂದು ಹೇಳಿದರು.