ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ‘ಕೊರೊನಾ ವೈರಸ್ ಮೇಲೆ ನಿಯಂತ್ರಣವಿಲ್ಲ, ಸಾಕಷ್ಟು ಲಸಿಕೆ ಇಲ್ಲ, ಉದ್ಯೋಗವಿಲ್ಲ, ಕಾರ್ಮಿಕರು ಮತ್ತು ರೈತರ ಸಮಸ್ಯೆಗಳನ್ನು ಕೇಳುವವರಿಲ್ಲ, ಮಧ್ಯಮ–ಸಣ್ಣ–ಸೂಕ್ಷ್ಮ ಉದ್ದಿಮೆಗಳಿಗೆ ರಕ್ಷಣೆಯಿಲ್ಲ, ಮಧ್ಯಮ ವರ್ಗದವರು ತೃಪ್ತರಾಗಿಲ್ಲ... ಮಾವಿನ ಹಣ್ಣನ್ನು ತಿನ್ನುವುದು ಸರಿ, ಆದರೆ ಜನಸಾಮಾನ್ಯರನ್ನಾದರೂ ಬಿಟ್ಟುಬಿಡಿ (ಆಮ್ ಖಾನಾ ಠೀಕ್ ಥಾ, ಆಮ್ ಜನ್ ಕೊ ತೋ ಛೋಡೇ ದೇತೆ!’) ಎಂದು ಉಲ್ಲೇಖಿಸಿದ್ದಾರೆ.