ನವದೆಹಲಿ/ಮುಂಬೈ: ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಅವರ ಸಹಚರ ಅಮಿತ್ ಚಾಂಡೋಲೆ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಅವರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದು, ವಿಚಾರಣೆಗಾಗಿ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರುವ ಸಂಭವವಿದೆ. ಬುಧವಾರ ಅಧಿಕಾರಿಗಳು ಅಮಿತ್ ಅವರನ್ನು ವಿಚಾರಣೆಗೆ ಒಳಪಡಿಸಿದರು.
ಸರ್ ನಾಯಕ್ ಅವರ ವ್ಯವಹಾರದಲ್ಲಿ ಅಮಿತ್ ಪಾತ್ರ ಇರುವ ಕುರಿತು ವಿಚಾರಣೆ ನಡೆದಿದೆ. ಸರ್ನಾಯಕ್ ಅವರಿಗೆ ಸೇರಿದ ವಿವಿಧ ತಾಣಗಳ ಮೇಲೆ ಇ.ಡಿ ಅಧಿಕಾರರಿಗಳು ನ.24ರಂದು ದಾಳಿ ನಡೆಸಿದ್ದರು.