ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್‌ ಬಿಮಾ ಯೋಜನೆಯಿಂದ ಕೋಟ್ಯಂತರ ರೈತರಿಗೆ ಲಾಭ: ಪ್ರಧಾನಿ ಮೋದಿ

Last Updated 13 ಜನವರಿ 2021, 8:01 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ದೇಶದ ಕೋಟ್ಯಂತರ ರೈತರಿಗೆ ಲಾಭವಾಗಿದೆ. ನೈಸರ್ಗಿಕ ವಿಕೋಪದಿಂದಾಗುವ ಹಾನಿ ವಿರುದ್ಧ ರೈತರಿಗೆ ಈ ಯೋಜನೆಯಿಂದ ರಕ್ಷಣೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಯೋಜನೆ ಆರಂಭವಾಗಿ ಐದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಅವರು ಟ್ವೀಟ್‌ ಮಾಡಿದ್ದಾರೆ.

ನಮೋ ಆ್ಯಪ್‌ನಲ್ಲಿ ಈ ಯೋಜನೆ ಕುರಿತು ವಿವರಗಳಿವೆ. ರೈತರು ಮಾಹಿತಿ ಪಡೆಯುವಂತೆಯೂ ಅವರು ಟ್ವೀಟ್‌ ಮಾಡಿದ್ದಾರೆ.

‘ಈ ಯೋಜನೆಯಡಿ ವಿಮಾ ಪರಿಹಾರ ವ್ಯಾಪ್ತಿಗೆ ಹೆಚ್ಚು ಬೆಳೆಗಳನ್ನು ಸೇರಿಸಲಾಗಿದೆ. ಹೀಗಾಗಿ ಹಾನಿಗೆ ಒಳಗಾಗುವ ಆತಂಕವನ್ನು ದೂರ ಮಾಡಿ, ರೈತರಿಗೆ ಅನುಕೂಲವನ್ನು ಮಾಡಿದೆ. ಈ ಯೋಜನೆಯಡಿ ಲಾಭ ಪಡೆದಿರುವ ರೈತರನ್ನು ಅಭಿನಂದಿಸುವೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT