ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಮ್ಲಜನಕಕ್ಕೆ ಅಪಾರ ಬೇಡಿಕೆ ಇದೆ. ಹೀಗಾಗಿ, ರಸಗೊಬ್ಬರ ಕಂಪನಿಗಳು ಈ ಕ್ರಮಕೈಗೊಂಡಿವೆ. ಇದರಿಂದ, ಆಸ್ಪತ್ರೆಗಳಲ್ಲಿನ ಆಮ್ಲಜನಕ ಕೊರತೆ ನೀಗಿಸಲು ಸಹಾಯವಾಗಲಿದೆ ಎಂದು ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಂದಾವಿಯಾ ಬುಧವಾರ ತಿಳಿಸಿದ್ದಾರೆ.