ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೆ.ಕೆ.ಸಿಂಗ್ ಅವರು ತನ್ನ ಮಗನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪಾಟ್ನಾದಲ್ಲಿ ದಾಖಲಿಸಿರುವ ದೂರು ಹಾಗೂ ಪಾಟ್ನಾದಲ್ಲಿ ನಡೆದಿರುವ ಯಾವುದೇ ಅಪರಾಧಕ್ಕೂ ಸಂಬಂಧವೇ ಇಲ್ಲ ಎಂದು ನಟಿ ರಿಯಾ ಚಕ್ರವರ್ತಿ ಮಂಗಳವಾರ ಸುಪ್ರಿಂ ಕೋರ್ಟ್ಗೆ ತಿಳಿಸಿದ್ದಾರೆ.
ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠದ ಎದುರು ನಟಿಯ ಪರವಾಗಿ ಹಾಜರಾಗಿದ್ದ ವಕೀಲ ಶ್ಯಾಮ್ ದಿವನ್ ಅವರು, ಬಿಹಾರದ ಹಸ್ತಕ್ಷೇಪ ಹಾಗೂ ಪ್ರಭಾವಕ್ಕೆ ಯಾವುದೇ ಕಾರಣಗಳಿಲ್ಲ. ಹೀಗಾಗಿ, ಈ ದೂರಿಗೆ ಸಂಬಂಧಿಸಿದಂತೆ ತಮಗೆ ಆತಂಕವಿದೆ ಎಂದು ಹೇಳಿದರು.
ಪ್ರಕರಣದ ಘಟನಾವಳಿಯನ್ನು ವಿವರಿಸಿದ ಅವರು ಪಟ್ನಾದಲ್ಲಿ ಪ್ರಕರಣ ದಾಖಲಿಸುವಲ್ಲಿ 38 ದಿನ ವಿಳಂಬವಾಗಿದೆ. ರಜಪೂತ್ ಅವರ ತಂದೆ ದಾಖಲಿಸಿರುವ ದೂರಿನ ಎಲ್ಲ ಅಂಶಗಳು ಮುಂಬೈಗೆ ಸಂಬಂಧಿಸಿದ್ದಾಗಿವೆ. ಮುಂಬೈ ಪೊಲೀಸರು ಆಗಲೇಪ್ರಕರಣ ಸಂಬಂಧ56 ಜನರ ಹೇಳಿಕೆ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಪ್ರತಿಭಾವಂತ ನಟನ ಆತ್ಮಹತ್ಯೆ ಹಿಂದಿನ ಕಾರಣಗಳು ಬಹಿರಂಗವಾಗಬೇಕು ಎಂದುಸುಪ್ರೀಂ ಕೋರ್ಟ್ ಆಗಸ್ಟ್ 5ರಂದು ಅಭಿಪ್ರಾಯಪಟ್ಟಿತ್ತು.