ಗುವಾಹಟಿ: ಮಣಿಪುರದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಅಸ್ಸಾಂ ರೈಫಲ್ಸ್ನ ಯೋಧರ ಮತ್ತು ಕುಟುಂಬ ಸದಸ್ಯರ ಮೃತದೇಹವನ್ನು ಸಾಗಿಸುತ್ತಿದ್ದ ಸೇನಾ ವಿಮಾನವೊಂದು ಭಾನುವಾರ ಅಸ್ಸಾಂನ ಜೋರ್ಹತ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಲಾಗಿದೆ. ಮೃತದೇಹಗಳನ್ನು ಜೋರ್ಹತ್ ವಿಮಾನ ನಿಲ್ದಾಣದಲ್ಲಿರಿಸಿ, ಸೋಮವಾರ ಕೊಂಡೊಯ್ಯಲಾಗುವುದು ಎಂದಿದ್ದಾರೆ.
ಮಣಿಪುರದ ಚುರಚಾಂದ್ಪುರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಯೋಧರು, ಸೇನಾಧಿಕಾರಿ ವಿಪ್ಲವ್ ತ್ರಿಪಾಠಿ, ಅವರ ಪತ್ನಿ ಮತ್ತು ಮಗ ಸೇರಿದಂತೆ 7 ಮಂದಿ ಮೃತಪಟ್ಟಿದ್ದರು.