ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ,ಕೇಂದ್ರ ಸರ್ಕಾರ ಜಿಡಿಪಿ ಎನ್ನುವ ಹೊಸ ಕಲ್ಪನೆಯನ್ನು ಆರಂಭಿಸಿದೆ. ಅಂದರೆ, ಗ್ಯಾಸ್ (ಅಡುಗೆ ಅನಿಲ), ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಳ ಮಾಡುವುದಾಗಿದೆ. ಇವುಗಳಿಂದ ಸಂಗ್ರಹವಾಗಿರುವ ₹23 ಲಕ್ಷ ಕೋಟಿ ಮೊತ್ತ ಎಲ್ಲಿ ಹೋಗಿದೆ ಎನ್ನುವುದನ್ನು ದೇಶದ ಜನತೆ ಪ್ರಶ್ನಿಸಬೇಕುಎಂದುಹೇಳಿದ್ದರು.