ತನಗೆ ಜಾಮೀನು ನಿರಾಕರಿಸುವ ಎನ್ಐಎ ನ್ಯಾಯಾಲಯದ ಆದೇಶದ ವಿರುದ್ಧ ಸ್ವಪ್ನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಕೆಯ ಮನವಿಯನ್ನು ವಿರೋಧಿಸಿ, ಎನ್ಐಎ ಆಕ್ಷೇಪಣೆ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಝಿಯಾದ್ ರಹಮಾನ್ ಎ.ಎ. ಅವರನ್ನೊಳಗೊಂಡ ಪೀಠ ಇತರ ಆರೋಪಿಗಳ ಜಾಮೀನು ಅರ್ಜಿಗಳ ಜತೆಯಲ್ಲಿ ಈ ಅರ್ಜಿಯನ್ನೂ ಜುಲೈ 29ರಂದು ವಿಚಾರಣೆಗೆ ಕೃಗೆತ್ತಿಕೊಳ್ಳುವುದಾಗಿ ತಿಳಿಸಿತು ಹಾಗೂ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ನ ನಿರ್ಧಾರಗಳಿಗೆ ಕಾಯುವುದಾಗಿ ತಿಳಿಸಿತು.