‘ಬನಾರಸ್ ಬಾರ್ ಅಸೋಸಿಯೇಷನ್ ಮತ್ತು ವಾರಾಣಸಿಯ ಸೆಂಟ್ರಲ್ ಬಾರ್ ಅಸೋಸಿಯೇಷನ್ನ ವಕೀಲರ ವಿರುದ್ಧ ಸರ್ಕಾರದ ಕಾರ್ಯದರ್ಶಿಯು ನೀಡಿದ್ದ ಹೇಳಿಕೆಯಿಂದ ವಕೀಲರು ಅಸಮಾಧಾನಗೊಂಡಿದ್ದರು. ಹಾಗಾಗಿ, ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ವಕೀಲರು ಮುಷ್ಕರ ನಡೆಸಿದರು. ಇದರಿಂದ ಬುಧವಾರ ನ್ಯಾಯಾಲಯದಲ್ಲಿ ಮಸೀದಿ ಪ್ರಕರಣದ ವಿಚಾರಣೆ ನಡೆಯಲಿಲ್ಲ’ ಎಂದು ಮುಸ್ಲಿಮರ ಪರ ವಕೀಲರಾದ ಅಭಯ್ ಯಾದವ್ ತಿಳಿಸಿದರು.