<p><strong>ಲಖನೌ:</strong> ‘ನನಗೆ ಮತ ಹಾಕದ ಹಿಂದುಗಳ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ’ಎಂದು ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಉತ್ತರ ಪ್ರದೇಶದ ಹಿಂದೂ ಯುವವಾಹಿನಿಯ ಮುಖ್ಯಸ್ಥರೂ ಆಗಿರುವ ಸಿಂಗ್ ದೊಮಾರಿಯಾ ಜಂಗ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿ 6ನೇ ಹಂತದ ಚುನಾವಣೆಯಲ್ಲಿ ಇಲ್ಲಿ ಮತದಾನ ನಡೆಯಲಿದೆ.</p>.<p>'ಹೇಳಿ, ಮುಸ್ಲಿಮರು ಯಾರಾದರೂ ನನಗೆ ಮತ ಹಾಕುತ್ತಾರಾ? ಜಾಗೃತರಾಗಿರಿ. ಒಂದು ಪಕ್ಷ ಈ ಹಳ್ಳಿಯ ಹಿಂದೂಗಳು ಬೇರೆಯವರನ್ನು ಬೆಂಬಲಿಸಿದರೆ ಅವರ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿರುತ್ತದೆ. ಅವರು ದೇಶದ್ರೋಹಿಗಳು.. ಹತ್ತು ಹಲವು ದೌರ್ಜನ್ಯಗಳ ಬಳಿಕವೂ ಒಬ್ಬ ಹಿಂದು ಬೇರೆಯವರಿಗೆ ಬೆಂಬಲ ನೀಡಿದರೆ ಅವರನ್ನು ಸಮಾಜದಲ್ಲಿ ಮುಖ ತೋರಿಸಲು ಬಿಡಬಾರದು’ಎಂದು ವೈರಲ್ ವಿಡಿಯೊದಲ್ಲಿ ಶಾಸಕರು ಹೇಳಿದ್ದಾರೆ.</p>.<p>ಯಾರಾದರೂ ನನ್ನ ಎಚ್ಚರಿಕೆ ಧಿಕ್ಕರಿಸಿದರೆ, ನಾನು ಯಾರೆಂದು ಅವರಿಗೆ ತೋರಿಸುತ್ತೇನೆ. ರಾಘವೇಂದ್ರ ಸಿಂಗ್ ಯಾರೆಂಬುದನ್ನು ಎಲ್ಲರಿಗೂ ಪರಿಚಯ ಮಾಡುತ್ತೇನೆ. ನಾನು ವೈಯಕ್ತಿಕ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಹಿಂದು ಸಮುದಾಯವನ್ನು ಅವಮಾನಿಸುವವರನ್ನು ನಾಶ ಮಾಡುತ್ತೇನೆ ಎಂದು ಗುಡುಗಿದ್ದಾರೆ.</p>.<p>ಐದು ದಿನಗಳ ಬಳಿಕ ಹೇಳಿಕೆ ನೀಡಿರುವುದನ್ನು ಒಪ್ಪಿಕೊಂಡಿರುವ ಶಾಸಕರು, ನಾನು ಬೇರೆ ಅರ್ಥದಲ್ಲಿ ಉದಾಹರಣೆಯಾಗಿ ಹಾಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ನನಗೆ ಮತ ಹಾಕದ ಹಿಂದುಗಳ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿದೆ’ಎಂದು ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಉತ್ತರ ಪ್ರದೇಶದ ಹಿಂದೂ ಯುವವಾಹಿನಿಯ ಮುಖ್ಯಸ್ಥರೂ ಆಗಿರುವ ಸಿಂಗ್ ದೊಮಾರಿಯಾ ಜಂಗ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿ 6ನೇ ಹಂತದ ಚುನಾವಣೆಯಲ್ಲಿ ಇಲ್ಲಿ ಮತದಾನ ನಡೆಯಲಿದೆ.</p>.<p>'ಹೇಳಿ, ಮುಸ್ಲಿಮರು ಯಾರಾದರೂ ನನಗೆ ಮತ ಹಾಕುತ್ತಾರಾ? ಜಾಗೃತರಾಗಿರಿ. ಒಂದು ಪಕ್ಷ ಈ ಹಳ್ಳಿಯ ಹಿಂದೂಗಳು ಬೇರೆಯವರನ್ನು ಬೆಂಬಲಿಸಿದರೆ ಅವರ ನರಗಳಲ್ಲಿ ಮುಸ್ಲಿಮರ ರಕ್ತ ಹರಿಯುತ್ತಿರುತ್ತದೆ. ಅವರು ದೇಶದ್ರೋಹಿಗಳು.. ಹತ್ತು ಹಲವು ದೌರ್ಜನ್ಯಗಳ ಬಳಿಕವೂ ಒಬ್ಬ ಹಿಂದು ಬೇರೆಯವರಿಗೆ ಬೆಂಬಲ ನೀಡಿದರೆ ಅವರನ್ನು ಸಮಾಜದಲ್ಲಿ ಮುಖ ತೋರಿಸಲು ಬಿಡಬಾರದು’ಎಂದು ವೈರಲ್ ವಿಡಿಯೊದಲ್ಲಿ ಶಾಸಕರು ಹೇಳಿದ್ದಾರೆ.</p>.<p>ಯಾರಾದರೂ ನನ್ನ ಎಚ್ಚರಿಕೆ ಧಿಕ್ಕರಿಸಿದರೆ, ನಾನು ಯಾರೆಂದು ಅವರಿಗೆ ತೋರಿಸುತ್ತೇನೆ. ರಾಘವೇಂದ್ರ ಸಿಂಗ್ ಯಾರೆಂಬುದನ್ನು ಎಲ್ಲರಿಗೂ ಪರಿಚಯ ಮಾಡುತ್ತೇನೆ. ನಾನು ವೈಯಕ್ತಿಕ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ಹಿಂದು ಸಮುದಾಯವನ್ನು ಅವಮಾನಿಸುವವರನ್ನು ನಾಶ ಮಾಡುತ್ತೇನೆ ಎಂದು ಗುಡುಗಿದ್ದಾರೆ.</p>.<p>ಐದು ದಿನಗಳ ಬಳಿಕ ಹೇಳಿಕೆ ನೀಡಿರುವುದನ್ನು ಒಪ್ಪಿಕೊಂಡಿರುವ ಶಾಸಕರು, ನಾನು ಬೇರೆ ಅರ್ಥದಲ್ಲಿ ಉದಾಹರಣೆಯಾಗಿ ಹಾಗೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>