‘ಜಮ್ಮು–ಕಾಶ್ಮೀರದ ಜನರ ಮನಸ್ಸು ಬಹಳ ಸುಂದರವಾಗಿದೆ. ಅಲ್ಲಿನ ಜನರೊಂದಿಗೆ ನಾನು ನಿಕಟ ಸಂಪರ್ಕ ಹೊಂದಿದ್ದೇನೆ. ಅವರು ಎಲ್ಲರನ್ನೂ ಪ್ರೀತಿಯಿಂದ ನೋಡುತ್ತಾರೆ. ಹಾಗಾಗಿ, ಅಲ್ಲಿ ತಪ್ಪು ದಾರಿ ಹಿಡಿಯುವವರನ್ನು ನಾವು ತಡೆಯಬೇಕು. ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಈ ಕೆಲಸ ಸಾಧ್ಯ. ಯುವಕರು ಭಯೋತ್ಪಾದನೆಯತ್ತ ಸಾಗುವುದನ್ನುತಾಯಂದಿರ ನೆರವಿನಿಂದ ತಡೆಯಬಹುದು. ಈ ಮೂಲಕ ಆರಂಭಿಕ ಹಂತದಲ್ಲೇ ಭಯೋತ್ಪಾದನೆಯನ್ನು ತಡೆಯಬಹುದು’ ಎಂದು ಅವರು ಕಿವಿಮಾತು ಹೇಳಿದರು.