<p><strong>ಕೊಚ್ಚಿ</strong>: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ದಿನಾಂಕ ಮತ್ತು ಎರಡನೇ ಡೋಸ್ ಲಸಿಕೆ ಪಡೆದ ಸ್ಥಳದ ಹೆಸರು ತಪ್ಪಾಗಿ ನಮೂದಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿಗೆ ಕೇರಳ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.</p>.<p>ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್, ಕಿಡಿಗೇಡಿತನದಿಂದಾಗಿ ಪ್ರಮಾಣ ಪತ್ರದಲ್ಲಿ ತಪ್ಪುಗಳಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.</p>.<p>ಪ್ರಮಾಣಪತ್ರದಲ್ಲಿ ನಮೂದಾಗಿರುವಂತೆ ಲಸಿಕೆಯ ಎರಡನೇ ಡೋಸ್ ಪಡೆದ ಸ್ಥಳ ಸರ್ಕಾರದ ಲಸಿಕಾ ಕೇಂದ್ರವಾಗಿದೆ. ಹಾಗಾಗಿ ಎರ್ನಾಕುಲಂನ ಜಿಲ್ಲಾ ವೈದ್ಯಕೀಯ ಅಧಿಕಾರಿಯವರು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.</p>.<p>‘ಒಂದೊಮ್ಮೆ ಸಹಜವಾಗಿ ತಪ್ಪಾಗಿರುವುದು ಖಚಿತವಾದರೆ, ಆಗಿರುವ ತಪ್ಪನ್ನು ಸರಿಪಡಿಸಿ ಹೊಸ ಪ್ರಮಾಣ ಪತ್ರವನ್ನು ನೀಡಬಹುದು. ಆದರೆ, ಇದು ಕಿಡಿಗೇಡಿತನದಿಂದಾದ ತಪ್ಪು ಎಂದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ನ್ಯಾಯಾಲಯ ಎಚ್ಚರಿಸಿದೆ. ಈ ಪ್ರಕರಣವನ್ನು ಒಂದು ವಾರದ ನಂತರ ನಡೆಯುವ ವಿಚಾರಣೆಗಳ ಪಟ್ಟಿಗೆ ಸೇರಿಸುವಂತೆ ಸೂಚಿಸಿದೆ.</p>.<p>‘ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ವಿವರಗಳು ತಪ್ಪಾಗಿ ನಮೂದಾಗಿವೆ‘ ಎಂದು ಆರೋಪಿಸಿ ಕೆ.ಪಿ.ಜಾನ್ ಎಂಬುವವರು ವಕೀಲರಾದ ಸಿ ದಿಲೀಪ್ ಮತ್ತು ಅನುಷ್ಕಾ ವಿಜಯಕುಮಾರ್ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>‘ತಮ್ಮ ಕಕ್ಷಿದಾರರು ಮಾರ್ಚ್ನಲ್ಲಿ ಮೊದಲ ಡೋಸ್ ಮತ್ತು ಏಪ್ರಿಲ್ನಲ್ಲಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಈ ಎರಡು ಡೋಸ್ ಲಸಿಕೆಯನ್ನು ಅಲುವದಲ್ಲಿರುವ ಲಸಿಕಾ ಕೇಂದ್ರದಿಂದ ಪಡೆದಿದ್ದಾರೆ. ಆದರೆ, ಪ್ರಮಾಣಪತ್ರದಲ್ಲಿರುವಂತೆ ಅವರೆಂದೂ ಲಸಿಕೆ ತೆಗೆದುಕೊಳ್ಳಲು ಎರ್ನಾಕಲಂಗೆ ಹೋಗಿಲ್ಲ‘ ಎಂದು ವಕೀಲ ವಿಜಯಕುಮಾರ್ ವಾದಿಸಿದರು.</p>.<p>ಲಸಿಕಾ ಪ್ರಮಾಣಪತ್ರದಲ್ಲಿಎರಡನೇ ಡೋಸನ್ನು ಎರ್ನಾಕುಲಂನಲ್ಲಿ ಜುಲೈನಲ್ಲಿ ತೆಗೆದುಕೊಂಡಿದ್ದಾಗಿ ನಮೂದಿಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಚ್ಚಿ</strong>: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ದಿನಾಂಕ ಮತ್ತು ಎರಡನೇ ಡೋಸ್ ಲಸಿಕೆ ಪಡೆದ ಸ್ಥಳದ ಹೆಸರು ತಪ್ಪಾಗಿ ನಮೂದಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿಗೆ ಕೇರಳ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.</p>.<p>ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್, ಕಿಡಿಗೇಡಿತನದಿಂದಾಗಿ ಪ್ರಮಾಣ ಪತ್ರದಲ್ಲಿ ತಪ್ಪುಗಳಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.</p>.<p>ಪ್ರಮಾಣಪತ್ರದಲ್ಲಿ ನಮೂದಾಗಿರುವಂತೆ ಲಸಿಕೆಯ ಎರಡನೇ ಡೋಸ್ ಪಡೆದ ಸ್ಥಳ ಸರ್ಕಾರದ ಲಸಿಕಾ ಕೇಂದ್ರವಾಗಿದೆ. ಹಾಗಾಗಿ ಎರ್ನಾಕುಲಂನ ಜಿಲ್ಲಾ ವೈದ್ಯಕೀಯ ಅಧಿಕಾರಿಯವರು ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.</p>.<p>‘ಒಂದೊಮ್ಮೆ ಸಹಜವಾಗಿ ತಪ್ಪಾಗಿರುವುದು ಖಚಿತವಾದರೆ, ಆಗಿರುವ ತಪ್ಪನ್ನು ಸರಿಪಡಿಸಿ ಹೊಸ ಪ್ರಮಾಣ ಪತ್ರವನ್ನು ನೀಡಬಹುದು. ಆದರೆ, ಇದು ಕಿಡಿಗೇಡಿತನದಿಂದಾದ ತಪ್ಪು ಎಂದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ನ್ಯಾಯಾಲಯ ಎಚ್ಚರಿಸಿದೆ. ಈ ಪ್ರಕರಣವನ್ನು ಒಂದು ವಾರದ ನಂತರ ನಡೆಯುವ ವಿಚಾರಣೆಗಳ ಪಟ್ಟಿಗೆ ಸೇರಿಸುವಂತೆ ಸೂಚಿಸಿದೆ.</p>.<p>‘ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರುವ ವಿವರಗಳು ತಪ್ಪಾಗಿ ನಮೂದಾಗಿವೆ‘ ಎಂದು ಆರೋಪಿಸಿ ಕೆ.ಪಿ.ಜಾನ್ ಎಂಬುವವರು ವಕೀಲರಾದ ಸಿ ದಿಲೀಪ್ ಮತ್ತು ಅನುಷ್ಕಾ ವಿಜಯಕುಮಾರ್ ಅವರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>‘ತಮ್ಮ ಕಕ್ಷಿದಾರರು ಮಾರ್ಚ್ನಲ್ಲಿ ಮೊದಲ ಡೋಸ್ ಮತ್ತು ಏಪ್ರಿಲ್ನಲ್ಲಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರು. ಈ ಎರಡು ಡೋಸ್ ಲಸಿಕೆಯನ್ನು ಅಲುವದಲ್ಲಿರುವ ಲಸಿಕಾ ಕೇಂದ್ರದಿಂದ ಪಡೆದಿದ್ದಾರೆ. ಆದರೆ, ಪ್ರಮಾಣಪತ್ರದಲ್ಲಿರುವಂತೆ ಅವರೆಂದೂ ಲಸಿಕೆ ತೆಗೆದುಕೊಳ್ಳಲು ಎರ್ನಾಕಲಂಗೆ ಹೋಗಿಲ್ಲ‘ ಎಂದು ವಕೀಲ ವಿಜಯಕುಮಾರ್ ವಾದಿಸಿದರು.</p>.<p>ಲಸಿಕಾ ಪ್ರಮಾಣಪತ್ರದಲ್ಲಿಎರಡನೇ ಡೋಸನ್ನು ಎರ್ನಾಕುಲಂನಲ್ಲಿ ಜುಲೈನಲ್ಲಿ ತೆಗೆದುಕೊಂಡಿದ್ದಾಗಿ ನಮೂದಿಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>