‘ಒಂದೊಮ್ಮೆ ಸಹಜವಾಗಿ ತಪ್ಪಾಗಿರುವುದು ಖಚಿತವಾದರೆ, ಆಗಿರುವ ತಪ್ಪನ್ನು ಸರಿಪಡಿಸಿ ಹೊಸ ಪ್ರಮಾಣ ಪತ್ರವನ್ನು ನೀಡಬಹುದು. ಆದರೆ, ಇದು ಕಿಡಿಗೇಡಿತನದಿಂದಾದ ತಪ್ಪು ಎಂದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು‘ ಎಂದು ನ್ಯಾಯಾಲಯ ಎಚ್ಚರಿಸಿದೆ. ಈ ಪ್ರಕರಣವನ್ನು ಒಂದು ವಾರದ ನಂತರ ನಡೆಯುವ ವಿಚಾರಣೆಗಳ ಪಟ್ಟಿಗೆ ಸೇರಿಸುವಂತೆ ಸೂಚಿಸಿದೆ.