ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣ ಸಂಬಂಧ, ಜಾರಿ ನಿರ್ದೇಶನಾಲಯದ ಮುಂದೆ, ಬಿಆರ್ಎಸ್ ನಾಯಕಿ ಕೆ. ಕವಿತಾ ಅವರು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಹೈದರಾಬಾದ್ನಲ್ಲಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಪೋಸ್ಟರ್ ಅಂಟಿಸಲಾಗಿದೆ.
ಪೋಸ್ಟರ್ನಲ್ಲಿ ಬಿ.ಎಲ್ ಸಂತೋಷ್ ಅವರ ಫೋಟೊ ಹಾಕಲಾಗಿದ್ದು, ‘ಶಾಸಕರ ಖರೀದಿ ಪ್ರಕರಣದಲ್ಲಿ ಬೇಕಾಗಿದ್ದಾರೆ‘ ಎಂದು ಬರೆಯಲಾಗಿದೆ. ಅಲ್ಲದೇ ಮೋದಿಯವರು ಮಾತುಕೊಟ್ಟಿರುವ ₹ 15 ಲಕ್ಷ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುವುದು ಎಂದೂ ಬರೆಯಲಾಗಿದೆ.
ಕಳೆದ ವಾರ ಮೊದಲ ಬಾರಿ ವಿಚಾರಣೆ ಹಾಜರಾಗುವ ವೇಳೆಯಲ್ಲೂ ಕೂಡ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಇತರೆ ಪಕ್ಷಗಳಿಂದ ಬಿಜೆಪಿ ಸೇರಿ ಉನ್ನತ ಸ್ಥಾನ ಪಡೆದ ನಾಯಕರ ಪೋಸ್ಟರ್ ಹಾಕಲಾಗಿತ್ತು.
Hyderabad,Telangana | BRS-BJP poster war: Ahead of ED questioning MLC K Kavitha now posters have come up in Hyderabad. In the posters BL Santosh, BJP National General Secretary has been shown as a criminal & 'Wanted'. Posters were seen at two different places in Hyderabad (14.3) pic.twitter.com/xxY7rZKlaL