ಆಸ್ಟ್ರೇಲಿಯಾದ ಲೋವಿ ಇನ್ಸ್ಟಿಟ್ಯೂಟ್ ಸಂಸ್ಥೆಯು ಆಯೋಜಿಸಿದ್ದ ಆನ್ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರ ಜೈಶಂಕರ್, ‘ಚೀನಾ ಜೊತೆಗೆ ಭಾರತದ ಸಂಬಂಧಕ್ಕೆ ಈ ವರ್ಷ ತೀವ್ರ ಹಾನಿಯಾಗಿದೆ. ಸಂಬಂಧವನ್ನು ಮುಂದುವರಿಸುವುದಕ್ಕೆ ಎಲ್ಎಸಿಯಲ್ಲಿ ಶಾಂತಿ ಕಾಪಾಡುವುದೇ ಮೂಲ ಎಂದು ಭಾರತವು ಚೀನಾಗೆ ಸ್ಪಷ್ಟಪಡಿಸಿದೆ. ಪ್ರಸ್ತುತ ಗಡಿಯಲ್ಲಿ ಉದ್ಭವವಾಗಿರುವ ಸಂಘರ್ಷದ ಸ್ಥಿತಿಯನ್ನು ಇಟ್ಟುಕೊಂಡು, ಜೀವನ ಹಾಗೂ ಇತರೆ ಕ್ಷೇತ್ರದ ಚಟುವಟಿಕೆಗಳಲ್ಲಿ ಮುಂದುವರಿಯೋಣ ಎಂದರೆ ಆಗುವುದಿಲ್ಲ. ಇದು ಅವಾಸ್ತವಿಕೆ’ ಎಂದರು.