ನವದೆಹಲಿ: ‘ಸಂಸದೀಯ ಕಾರ್ಯದರ್ಶಿ ಜಿ.ನಾರಾಯಣ್ ರಾಜು ಅವರು(62) ಕೋವಿಡ್ನಿಂದಾಗಿ ನಿಧನರಾದರು’ ಎಂದು ಅಧಿಕಾರಿಗಳು ಬುಧವಾರ ತಿಳಿಸಿದರು.
‘ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಜಿ.ನಾರಾಯಣ್ ರಾಜು ಅವರನ್ನು ಡಿಆರ್ಡಿಒ ನಿರ್ಮಿಸಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಂಗಳವಾರ ರಾತ್ರಿ ಕೊನೆ ಉಸಿರೆಳೆದರು’ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದರು.
ನಾರಾಯಣ್ ರಾಜು ಅವರ ಅಧಿಕಾರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಇತ್ತೀಚಿಗೆ ಸರ್ಕಾರ ವಿಸ್ತರಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.