ಮುಂಬೈ: ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಹಾಗೂ ರಾಜ್ಯ ಎನ್ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಅವರಿಗೆ ಕೋವಿಡ್ ದೃಢಪಟ್ಟಿದೆ.
ಸಚಿವರು ಸ್ವತಃ ಟ್ವೀಟ್ ಮಾಡಿ ಈ ವಿಷಯ ಹೇಳಿಕೊಂಡಿದ್ದು, ತಾವು ಸೂಕ್ತ ವೈದ್ಯಕೀಯ ಸಲಹೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಾಷ್ಟ್ರವಾದಿ ಪರಿವಾರ್ ಸಂವಾದ ಯಾತ್ರೆಯ ಸಲುವಾಗಿ ಅವರು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದರು. ತಮ್ಮ ಸಂಪರ್ಕಕ್ಕೆ ಬಂದವರು ಸ್ವಯಂ ಕ್ವಾರಂಟೈನ್ಗೆ ಒಳಗಾಗುವಂತೆ ಅವರು ಸಲಹೆ ನೀಡಿದ್ದಾರೆ.
ಸಚಿವರಾದ ಅನಿಲ್ ದೇಶ್ಮುಖ್, ಸಾತೇಜ್ ಪಾಟೀಲ್ ಮತ್ತು ರಾಜೇಂದ್ರ ಶಿಂಗ್ನೆ ಅವರಿಗೂ ಈಚೆಗೆ ಈ ಸೋಂಕು ತಗುಲಿತ್ತು.ಕಳೆದ ವರ್ಷ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹಿತ 12ಕ್ಕೂ ಅಧಿಕ ಸಚಿವರಿಗೆ ಕೋವಿಡ್ ಬಾಧಿಸಿತ್ತು.