ಶಿವಸೇನಾ ಉದ್ಧವ್ ಠಾಕ್ರೆ ಬಣದ ಪರ ವಕೀಲ ಕಪಿಲ್ ಸಿಬಲ್ ವಾದಿಸಿ, ‘ಸ್ಪೀಕರ್ ಅವರನ್ನು ಅಮಾನತುಗೊಳಿಸಲು ಮೊದಲೇ ನಿರ್ಣಯ ಮಂಡನೆ ಆಗಿರುವಾಗ, ಅದೇ ಸ್ಪೀಕರ್, ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವಂತಿಲ್ಲ ಎಂದು 2016ರಲ್ಲಿ ಐವರು ನ್ಯಾಯಮೂರ್ತಿಗಳಿದ್ದ ಪೀಠವು ನಬಂ ರಬಿಯಾ ಪ್ರಕರಣದಲ್ಲಿ ಹೇಳಿದೆ. ಈ ತೀರ್ಪಿನ ಮರು ಪರಿಶೀಲನೆಯಾಗಬೇಕು. ಏಳು ನ್ಯಾಯಮೂರ್ತಿಗಳ ಪೀಠವು ಇದರ ಮರುಪರಿಶೀಲನೆ ನಡೆಸಬೇಕು’ ಎಂದು ಕೋರಿದರು.