ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರದ ಪ್ರಕರಣ| ಟಿಎಂಸಿ ಮುಖಂಡರ ಬಂಧನಕ್ಕೆ ಮಮತಾ ಕಿಡಿ: ಸಿಬಿಐ ಕಚೇರಿಗೆ ಭೇಟಿ

Last Updated 17 ಮೇ 2021, 6:53 IST
ಅಕ್ಷರ ಗಾತ್ರ

ಕೋಲ್ಕತ್ತ,ಪಶ್ಚಿಮಬಂಗಾಳ (ಪಿಟಿಐ): ನಾರದಾ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ಟಿಎಂಸಿಯ ಇಬ್ಬರು ಸಚಿವರು ಮತ್ತು ಶಾಸಕರೊಬ್ಬರು ಬಂಧನಕ್ಕೆ ಒಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಬಿಐ ಕಚೇರಿಗೆ ಧಾವಿಸಿದರು.

ಇದಕ್ಕೂ ಮೊದಲು ಅವರು ಸಚಿವ ಹಕೀಮ್‌ ಅವರ ಮನೆಗೂ ತೆರಳಿದ್ದರು ಎಂದು ಹೇಳಲಾಗಿದೆ.

'ಪ್ರಕರಣದಲ್ಲಿ ಟಿಎಂಸಿ ಮುಖಂಡರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಸಿಬಿಐ ಮೊದಲು ನನ್ನನ್ನು ಬಂಧಿಸಲಿ,' ಎಂದು ಮಮತಾ ಬ್ಯಾನರ್ಜಿ ಅವರು ಸಿಬಿಐಗೆ ಸವಾಲು ಹಾಕಿದರು ಎಂದು ವಕೀಲ, ಟಿಎಂಸಿ ಮುಖಂಡಅನಿಂದ್ಯಾ ರೌತ್‌ ಪತ್ರಕರ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT