ಕೋಲ್ಕತ್ತ,ಪಶ್ಚಿಮಬಂಗಾಳ (ಪಿಟಿಐ): ನಾರದಾ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ಟಿಎಂಸಿಯ ಇಬ್ಬರು ಸಚಿವರು ಮತ್ತು ಶಾಸಕರೊಬ್ಬರು ಬಂಧನಕ್ಕೆ ಒಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಬಿಐ ಕಚೇರಿಗೆ ಧಾವಿಸಿದರು.
ಇದಕ್ಕೂ ಮೊದಲು ಅವರು ಸಚಿವ ಹಕೀಮ್ ಅವರ ಮನೆಗೂ ತೆರಳಿದ್ದರು ಎಂದು ಹೇಳಲಾಗಿದೆ.
'ಪ್ರಕರಣದಲ್ಲಿ ಟಿಎಂಸಿ ಮುಖಂಡರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಸಿಬಿಐ ಮೊದಲು ನನ್ನನ್ನು ಬಂಧಿಸಲಿ,' ಎಂದು ಮಮತಾ ಬ್ಯಾನರ್ಜಿ ಅವರು ಸಿಬಿಐಗೆ ಸವಾಲು ಹಾಕಿದರು ಎಂದು ವಕೀಲ, ಟಿಎಂಸಿ ಮುಖಂಡಅನಿಂದ್ಯಾ ರೌತ್ ಪತ್ರಕರ್ತರಿಗೆ ತಿಳಿಸಿದರು.
CBI to file charge sheet against five accused, including three arrested TMC leaders, in Narada sting case on Monday: Officials